- ನೆಲಪ್ಪಾಲಿನಲ್ಲಿ ‘ನೆಲಪ್ಪಾಲು ಉದ್ಯಾನ’ ಲೋಕಾರ್ಪಣೆ
ಪುತ್ತೂರು: ಸ್ವಚ್ಛ ಸರ್ವೇಕ್ಷಣೆದಲ್ಲಿ ಸ್ವಚ್ಛತೆಯಲ್ಲಿ ಪುತ್ತೂರು ನಗರಸಭೆಗೆ ೩ನೇ ಸ್ಥಾನ ಏರುವ ಮೂಲಕ ಪುತ್ತೂರು ನಗರಸಭೆಯನ್ನು ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಮಾದರಿಯಾಗಿಸುವ ಜೊತೆಗೆ ಪುತ್ತೂರಿನ ಸೌಂದರ್ಯಕರಣಕ್ಕೆ ಹೆಚ್ಚು ಒತ್ತು ನೀಡಿದ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರಿಂದ ಪುತ್ತೂರಿನ ವಿವಿಧ ಕಡೆ ೧೫ನೇ ಹಣಕಾಸು ಮತ್ತು ನಗರಸಭೆ ಅನುದಾನದಲ್ಲಿ ಉದ್ಯಾನ ನಿರ್ಮಾಣ ಮಾಡುತ್ತಿದ್ದು, ಆ.೨೦ರಂದು ಸಂಜೆ ನೆಲಪ್ಪಾಲಿನಲ್ಲಿ ನೂತನ ನೆಲಪ್ಪಾಲು ಉದ್ಯಾನ ಲೋಕಾರ್ಪಣೆಗೊಂಡಿದೆ.
ರೂ. ೫೩ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೆಲಪ್ಪಾಲು ಉದ್ಯಾನವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿದರು. ನಗರಸಭೆ ಸದಸ್ಯರು ಅತಿಥಿಗಳಾಗಿ ಭಾಗವಹಿಸಿದ್ದರು.