ಹಿರೆಬಂಡಾಡಿ: ಶ್ರೀ ಸುಬ್ರಹ್ಮಣ್ಯ ಮಹಾದ್ವಾರದ ಲೋಕಾರ್ಪಣೆ

0

ಹಿರೆಬಂಡಾಡಿ: ಹಿರೆಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನ ಸಂಪರ್ಕ ರಸ್ತೆಯ ಹಿರೆಬಂಡಾಡಿ ಮುರದಮೇಲು ಎಂಬಲ್ಲಿ ಸುಮಾರು 3 ಲಕ್ಷ ರೂ.,ವೆಚ್ಚದಲ್ಲಿ ಹಿರೆಬಂಡಾಡಿ ಶ್ರೀ ಷಣ್ಮುಖ ಮಿತ್ರವೃಂದದವರು ನಿರ್ಮಿಸಿದ ಮಹಾದ್ವಾರದ ಲೋಕಾರ್ಪಣೆ ಆ.31ರಂದು ನಡೆಯಿತು.

ಮಹಾದ್ವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರುರವರು, ಊರಿನ ಯುವ ಜನತೆ ಮನಸ್ಸು ಮಾಡಿದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ ಎಂಬುದನ್ನು ಇಲ್ಲಿನ ಷಣ್ಮುಖ ಮಿತ್ರವೃಂದದ ಸದಸ್ಯರು ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ಯುವಕರು ಸಮಾಜಕ್ಕೆ ಮಾದರಿ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಹಿರೆಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ, ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷ ಲಕ್ಷ್ಮೀಶ ನಿಡ್ಡೆಂಕಿ, ಷಣ್ಮುಖ ಮಿತ್ರವೃಂದದ ಅಧ್ಯಕ್ಷ ಲೋಕೇಶ್, ಗ್ರಾ.ಪಂ.ಸದಸ್ಯರು, ಷಣ್ಮುಖ ಮಿತ್ರವೃಂದದ ಸದಸ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯರವರು ಪೂಜಾ ವಿಧಿವಿಧಾನ ನೆರವೇರಿಸಿದರು. ಷಣ್ಮುಖ ಮಿತ್ರವೃಂದದ ಸದಸ್ಯ ವಿನೋದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here