ಚೆಸ್ ಮುಕ್ತ ವಿಭಾಗದಲ್ಲಿ ಪುತ್ತೂರಿನ ಧನುಷ್‌ರಾಮ್ ಚಾಂಪಿಯನ್ – ದೆಹಲಿಯಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಲು ಆಯ್ಕೆ

0

ಪುತ್ತೂರು: ಉಡುಪಿಯ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಮತ್ತು ಕುಂದಾಪುರದ ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ ಆಯೋಜಿಸಿದ್ದ 15 ವರ್ಷದೊಳಗಿನ ಫಿಡೆ ರೇಟೆಡ್ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮಕ್ತು ವಿಭಾಗದ ಚಾಂಪಿಯನ್ ಆಗಿ ಪುತ್ತೂರಿನ ಧನುಷ್‌ರಾಮ್ ಹೊರ ಹೊಮ್ಮಿದ್ದು, ನವಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಸೆ.4ರಂದು ಉಡುಪಿಯ ಎಲ್‌ಐಸಿಒ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಹುಡುಗರ ವಿಭಾಗದಲ್ಲಿ ಕೊನೆಯ ಸುತ್ತಿನ ಸ್ಪರ್ಧೆಯಲ್ಲಿ ಧನುಷ್‌ರಾಮ್ ಅವರು ಬೆಂಗಳೂರಿನ ಸ್ಯಾಮ್ಯುಯೆಲ್ ಮ್ಯಾಥ್ಯೂ ಜೊತೆ ಡ್ರಾ ಸಾಧಿಸಿದರು. ಧನುಷ್‌ರಾಮ್ ಅವರು ಪುತ್ತೂರಿನ ಕಿಯೋನಿಕ್ಸ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಪ್ರಸನ್ನ, ಮತ್ತು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ದಂಪತಿ ಪುತ್ರ.

LEAVE A REPLY

Please enter your comment!
Please enter your name here