ಅಂತರ್‌ಜಿಲ್ಲಾ ಮಟ್ಟದ ಚಿಕ್ರಕಲೆ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿಯ ಸಹರ್ಷ್ ವಿ. ರೈ ದ್ವಿತೀಯ

0

ಕಾಣಿಯೂರು: ಚೆರ್ರಿಲರ್ನ್ ಸಂಸ್ಥೆಯು ೭೫ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪ್ರಯುಕ್ತ ೧ರಿಂದ ೫ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಜಿಲ್ಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ೩ನೇ ತರಗತಿ ವಿದ್ಯಾರ್ಥಿ ಸಹರ್ಷ್ ವಿ.ರೈ ದ್ವಿತೀಯ ಸ್ಥಾನ ಪಡೆದು, ಸೆ ೮ರಂದು ಪುತ್ತೂರು ಕಬಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಚೆರ್ರಿಲರ್ನ್ ಆಪ್‌ನ್ನು ಲೋಕಾರ್ಪಣೆ ಮಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಪ್ಪ ಅವರಿಂದ ಬಹುಮಾನ ಸ್ವೀಕರಿಸಿದರು. ಸಹರ್ಷ್‌ರವರು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಮತ್ತು ಶಿಕ್ಷಕಿ ಕವಿತಾ

ವಿ.ರೈ ಅವರ ಪುತ್ರ.

 

LEAVE A REPLY

Please enter your comment!
Please enter your name here