ಬಿಳಿನೆಲೆ ಗ್ರಾ.ಪಂ ವತಿಯಿಂದ ಕೊರಗರ ಕಾಲನಿಯ 10 ಕುಟುಂಬಗಳಿಗೆ ಕುಡಿಯುವ ನೀರಿನ ಟ್ಯಾಂಕ್ ವಿತರಣೆ

0

ಕಡಬ: ಬಿಳಿನೆಲೆ ಗ್ರಾ.ಪಂ ವತಿಯಿಂದ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಆದಿನೆಲೆ ಕೊರಗರ ಕಾಲನಿ ಸಭಾಭವನದಲ್ಲಿ ಸುಮಾರು 10 ಕುಟುಂಬಗಳಿಗೆ ಕುಡಿಯುವ ನೀರಿನ ಟ್ಯಾಂಕ್ ವಿತರಣೆ ಮಾಡಲಾಯಿತು. ಗ್ರಾ.ಪಂ ಅಧ್ಯಕ್ಷ ಶಿವಶಂಕರ್ ಕೆ, ಉಪಾಧ್ಯಕ್ಷೆ ಶಾರದ ದಿನೇಶ್, ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಸತೀಶ್ ಕಳಿಗೆ, ಬೇಬಿ, ಚಂದ್ರಾವತಿ, ಮುರಳೀಧರ ಎ, ಭವ್ಯಶ್ರೀ ಕುಕ್ಕಾಜೆ, ಶಾರದ ಬಿಳಿನೆಲೆ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತಾ ಹಾಗೂ ಸಿಬ್ಬಂದಿ ವರ್ಗ, ಮಾಜಿ ಸದಸ್ಯರಾದ ಮನೋಜ್ ಕುಮಾರ್, ನಿವೃತ್ತ ಪ್ರಾಂಶುಪಾಲ ಜೆ.ಪಿ.ಯಂ ಚೆರಿಯಾನ್, ಗ್ರಾಮಸ್ಥರಾದ ಪ್ರಶಾಂತ್, ಗುಡ್ಡಪ್ಪ ಗೌಡ ಅಮೈ, ನಾಗೇಶ ಬೈಲು, ಅನೀಶ್, ಆದಿವಾಸಿ ಕಾಲೋನಿಯ ಎಲ್ಲಾ ಫಲಾನುಭವಿಗಳು ಭಾಗವಹಿಸಿದರು.

ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆ:
ಗ್ರಾ.ಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿಯವರ ಪುತ್ರ ವಿಶಾಲ್ ಸಂಜಯ್‌ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸುಧೀರ್ ಕುಮಾರ್ ಶೆಟ್ಟಿಯವರು ಕಾಲನಿಯವರಿಗೆ ಊಟದ ವ್ಯವಸ್ಥೆ ಮಾಡಿ ಮೆಚ್ಚುಗೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here