ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ಉದ್ಘಾಟನೆ

0

  • ಪ್ರಾಮಾಣಿಕೆ ಸೇವೆಯಿಂದ ಸಂಘದ ಬೆಳವಣಿಗೆ: ಸಂಜೀವ ಪೂಜಾರಿ
  • ಸಂಕಷ್ಟದಲ್ಲಿರುವವರಿಗೆ ನೆರಳಾಗಿ ಹೆಮ್ಮರವಾಗಿ ಬೆಳೆಯಲಿ: ರೆ.ಫಾ.ಹನಿ ಜೇಕಬ್
  • ಆರ್ಥಿಕ ಸದೃಢತೆ ಒದಗಲಿ: ಸಿಡಿಪಿಒ ಶ್ರೀಲತಾ
  • ಮಾದರಿ ಸಂಸ್ಥೆಯಾಗಿ ಬೆಳೆಯಲಿ: ಗೌರಿ ಬನ್ನೂರು
  • ಹೆಣ್ಣುಮಕ್ಕಳು ಬೆಳೆದರೆ ದೇಶ ಬೆಳೆದಂತೆ: ದಿವ್ಯಾಪ್ರಭಾ
  • ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಸಿಗಲಿ: ಆನಂದ ಅಜಿಲ
  • ಉತ್ತರೋತ್ತರ ಅಭಿವೃದ್ಧಿಯಾಗಲಿ: ಚೇತನಾ
  • ಜನರಿಗೆ ಎಲ್ಲಾ ರೀತಿಯ ಸಹಕಾರ: ಉಷಾಅಂಚನ್

ನೆಲ್ಯಾಡಿ: ನೆಲ್ಯಾಡಿ ಲೋಟಸ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಡಬ ತಾಲೂಕಿನ ಪ್ರಥಮ ಮಹಿಳಾ ಸಹಕಾರಿ ಸಂಘವಾಗಿ ನೊಂದಣಿಯಾಗಿರುವ ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇದರ ಉದ್ಘಾಟನೆ ಸೆ.9ರಂದು ನೆಲ್ಯಾಡಿಯಲ್ಲಿ ನಡೆಯಿತು.

ಮೂರ್ತೆದಾರ ಮಹಾಮಂಡಲ ಬಿ.ಸಿ.ರೋಡ್ ಇದರ ಅಧ್ಯಕ್ಷ ಸಂಜೀವ ಪೂಜಾರಿಯವರು ಕಚೇರಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ತನ್ನ ಸದಸ್ಯರ ವಿಶ್ವಾಸ, ನಂಬಿಕೆಗೆ ಅರ್ಹವಾಗಿ ಕೆಲಸ ನಿರ್ವಹಿಸಬೇಕು. ಯಾವುದೇ ಟೀಕೆ ಬಂದರೂ ಹೆದರದೇ ಬೆದರದೇ ತಮ್ಮ ಕರ್ತವ್ಯ, ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದಲ್ಲಿ ಸಂಘದ ಬೆಳವಣಿಗೆಯಾಗಲಿದೆ ಎಂದರು. ಈ ಸಂಘದ ಮುಖ್ಯ ಪ್ರವರ್ತಕರಾಗಿರುವ ಉಷಾಅಂಚನ್‌ರವರಿಗೆ ಸಹಕಾರ ಕ್ಷೇತ್ರದಲ್ಲಿ ದುಡಿದ ಸಾಕಷ್ಟು ಅನುಭವವಿದೆ. ಕಂಪ್ಯೂಟರ್, ಲಾಕರ್ ಸೇರಿದಂತೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಂಡೇ ಸಂಘ ಆರಂಭಿಸಿದ್ದಾರೆ. ಈ ಸಂಘವನ್ನು ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ೨೫ ಲಕ್ಷ ರೂ.ಠೇವಣಿ ಇಟ್ಟಿದ್ದು ಇನ್ನಷ್ಟೂ ಠೇವಣಿ ಇಡಲು ಬದ್ಧನಾಗಿದ್ದೇನೆ ಎಂದು ಸಂಜೀವ ಪೂಜಾರಿಯವರು ಹೇಳಿದರು.

ಭದ್ರತಾಕೊಠಡಿ ಉದ್ಘಾಟಿಸಿದ ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳ ಸಂಚಾಲಕ ರೆ.ಫಾ.ಹನಿಜೇಕಬ್‌ರವರು ಮಾತನಾಡಿ, ಯಾವುದೇ ಸಂಘ,ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಬೇಕಾದಲ್ಲಿ ಅದರ ಸದಸ್ಯರಲ್ಲಿ ತ್ಯಾಗ ಮನೋಭಾವ ಇರಬೇಕು. ಮಹಿಳೆಯರು ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಸರಕಾರಗಳೂ ಮಹಿಳೆಯ ಸಬಲೀಕರಣಕ್ಕಾಗಿ ಹಲವು ಯೋಜನೆಯನ್ನೂ ಜಾರಿಗೆ ತಂದಿದೆ. ಗ್ರಾಮೀಣ ಭಾಗವಾದ ನೆಲ್ಯಾಡಿಯಲ್ಲಿ ಮಹಿಳೆಯರೇ ಸೇರಿಕೊಂಡು ಆರಂಭಿಸಿರುವ ಕಾಮಧೇನು ಮಹಿಳಾ ಸಹಕಾರ ಸಂಘ ಗ್ರಾಮ, ತಾಲೂಕು, ರಾಜ್ಯದಲ್ಲಿ ಹೆಸರುಗಳಿಸಲಿ. ಸಂಕಷ್ಟದಲ್ಲಿರುವವರಿಗೆ ನೆರಳಾಗಿ ಮುಂದೆ ಹೆಮ್ಮರವಾಗಿ ಬೆಳೆಯಲಿ ಎಂದು ಹೇಳಿದರು.

ನೂತನ ಕಚೇರಿಯಲ್ಲಿ ದೀಪ ಪ್ರಜ್ವಲನೆ ಮಾಡಿ ಬಳಿಕ ನಡೆದ ಸಮಾರಂಭದಲ್ಲಿ ಠೇವಣಿಪತ್ರ ಬಿಡುಗಡೆಗೊಳಿಸಿದ ಪುತ್ತೂರು ಸಿಡಿಪಿಒ ಶ್ರೀಲತಾರವರು ಮಾತನಾಡಿ, ಹಿಂದೆ ಜನಾರ್ದನ ಪೂಜಾರಿಯವರು ಸಾಲಮೇಳದ ಮೂಲಕ ಬಡವರ ಸಂಕಷ್ಟಕ್ಕೆ ನೆರವಾಗಿದ್ದರು. ಅದೇ ರೀತಿ ತಾ.ಪಂ.ಮಾಜಿ ಸದಸ್ಯೆಯಾಗಿರುವ ಉಷಾಅಂಚನ್‌ರವರು ನೆಲ್ಯಾಡಿ ಭಾಗದಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷ ಬೇಧ ಮರೆತು ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳಿಂದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಇದೀಗ ಅವರ ನೇತೃತ್ವದಲ್ಲಿ ಶುಭಶುಕ್ರವಾರ ಭಾಗ್ಯಲಕ್ಷ್ಮೀಯಾಗಿ ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿಯಲ್ಲಿ ಆರಂಭಗೊಂಡಿದೆ. ಈ ಸಂಘದ ಮೂಲಕ ಈ ಭಾಗದ ಜನರಿಗೆ ಆರ್ಥಿಕ ಸದೃಢತೆ ಒದಗಲಿ. ಸಂಘ ಇತಿಹಾಸ ನಿರ್ಮಿಸಲಿ ಎಂದರು.

ಷೇರುಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಪುತ್ತೂರು ಮಹಿಳಾ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಗೌರಿ ಬನ್ನೂರುರವರು ಮಾತನಾಡಿ, ಸಹಕಾರ ಸಂಘದ ಬೆಳವಣಿಗೆ ನಿಟ್ಟಿನಲ್ಲಿ ಸಾಲವಿತರಣೆ, ಸಾಲ ವಸೂಲಾತಿ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ. ಸಾಲ ವಿತರಣೆಯಲ್ಲಿ ಯಾವುದೇ ಪ್ರಭಾವ, ರಾಜಕೀಯ ಇರಬಾರದು. ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಸಮಾನವಾಗಿ ಮುನ್ನಡೆಯಬೇಕು. ಸೂಕ್ಷ್ಮತೆಯಿಂದ ಕೆಲಸ ನಿರ್ವಹಿಸಬೇಕಿದೆ. ಸತ್ಯ,ಪ್ರಾಮಾಣಿಕತೆಯಿಂದ ಸಂಘ ಮುನ್ನಡೆಸಿದಲ್ಲಿ ಯಾವುದೇ ಟೀಕೆಗಳಿದ್ದರೂ ಸಂಘ ಬೆಳೆಯಲಿದೆ. ಕಾಮಧೇನು ಮಹಿಳಾ ಸಹಕಾರ ಸಂಘ ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎಂದರು.

ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಾಪ್ರಭಾ ಚಿಲ್ತಡ್ಕ ಮಾತನಾಡಿ, ಸಹಕಾರ ಸಂಘ ಸ್ಥಾಪಿಸಿ ಮುನ್ನಡೆಸಿಕೊಂಡು ಹೋಗುವುದು ಮಹಿಳೆಯರಿಗೆ ಕಷ್ಟದ ಕೆಲಸ ಆಗಿದೆ. ಆದರೂ ನೆಲ್ಯಾಡಿ ಭಾಗದ ಸಮಾನ ಮನಸ್ಕ ಮಹಿಳೆಯರು ಸೇರಿಕೊಂಡು ಕಾಮಧೇನು ಮಹಿಳಾ ಸಹಕಾರ ಸಂಘ ಆರಂಭಿಸಿದ್ದಾರೆ. ಹೆಣ್ಮಕ್ಕಳ ಬೆಳವಣಿಗೆಗೆ ಸಹಕಾರ ನೀಡಬೇಕಿದೆ. ಹೆಣ್ಣು ಮಕ್ಕಳು ಬೆಳೆದರೆ ದೇಶ ಬೆಳೆದಂತೆ ಎಂದು ಹೇಳಿದ ಅವರು, ಸಂಘದ ಮುಖ್ಯ ಪ್ರವರ್ತಕರಾಗಿರುವ ಉಷಾ ಅಂಚನ್‌ರವರು ಹುಟ್ಟು ಹೋರಾಟಗಾರ್ತಿ. ಜನಪ್ರತಿನಿಧಿಯಾಗಿ ಅವರ ಈ ಭಾಗದಲ್ಲಿ ಮಾಡಿರುವ ಸಾಮಾಜಿಕ ಸೇವೆ ಗಮನಿಸಿದ್ದೇವೆ. ಅವರಿಗೆ ಇನ್ನಷ್ಟೂ ಸೇವೆ ಮಾಡುವ ಅವಕಾಶ ಭಗವಂತ ಅನುಗ್ರಹಿಸಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲರವರು ಮಾತನಾಡಿ, ತಾ.ಪಂ.ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಉಷಾ ಅಂಚನ್‌ರವರು ನೆಲ್ಯಾಡಿ ಶಾಲೆಗೆ ಸಾಕಷ್ಟೂ ಅನುದಾನ ಒದಗಿಸಿಕೊಟ್ಟಿದ್ದಾರೆ. ಅವರ ನೇತೃತ್ವದಲ್ಲಿ ಆರಂಭಗೊಂಡಿರುವ ಸಂಘದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಲಿ. ಈ ಸಂಘ ಈ ಭಾಗದ ಜನರಿಗೆ ಕಾಮಧೇನು ಆಗಲಿ ಎಂದರು. ಇನ್ನೋರ್ವ ಅತಿಥಿ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾರವರು ಮಾತನಾಡಿ, ಕಾಮಧೇನು ಮಹಿಳಾ ಸಹಕಾರ ಸಂಘ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು. ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರು ಗಣಕಯಂತ್ರ ಉದ್ಘಾಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಮುಖ್ಯಪ್ರವರ್ತಕಿ ಉಷಾ ಅಂಚನ್‌ರವರು ಮಾತನಾಡಿ, ನನ್ನ ಜೀವನದಲ್ಲಿ ಪಕ್ಷಬೇಧ ಮರೆತು ಸಾಮಾಜಿಕ ಸೇವೆ ಮಾಡಿದ್ದೇನೆ. ವಿಜಯಕುಮಾರ್ ಸೊರಕೆಯವರು ಬಿಲ್ಲವ ಸಂಘದಲ್ಲಿ, ಸಂಜೀವ ಪೂಜಾರಿಯವರು ಸಹಕಾರ ಕ್ಷೇತ್ರದಲ್ಲಿ, ಶೇಖರ ಪೂಜಾರಿಯವರು ಉಪ್ಪಿನಂಗಡಿ ಮೂರ್ತೆದಾರರ ಸಂಘದಲ್ಲಿ ನನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಸಾಮಾಜಿಕ ಸೇವೆಯಲ್ಲಿ ಹಲವು ಟೀಕೆ ಕೇಳಿಬಂದರೂ ಅದನ್ನೆಲ್ಲಾ ಮೆಟ್ಟಿನಿಂತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದ ಆತ್ಮತೃಪ್ತಿ ನನ್ನಲ್ಲಿ ಇದೆ. ಕಾಮಧೇನು ಮಹಿಳಾ ಸಹಕಾರ ಸಂಘ ಆರಂಭಕ್ಕೆ ಈ ಭಾಗದ ಜನರು ತುಂಬಾ ಸಹಕಾರ ಕೊಟ್ಟಿದ್ದಾರೆ. ಸಹಕಾರ ಇಲಾಖೆಯ ಅಽಕಾರಿಗಳು, ಸಲಹಾ ಸಮಿತಿಯವರು ಸಹಕಾರ ನೀಡಿದ್ದಾರೆ. ಸಂಘ ರಾಜಕೀಯ ರಹಿತವಾಗಿ, ಜಾತಿ, ಬಡವ-ಶ್ರೀಮಂತ ಎಂಬ ಬೇಧ ಮಾಡದೇ ಕೆಲಸ ನಿರ್ವಹಿಸಲಿದೆ. ಜನರ ತುರ್ತು ಅವಶ್ಯಕತೆಗೆ ಶೀಘ್ರ ಸಾಲ ನೀಡುವುದು ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ ಎಂದರು.

ಪ್ರವರ್ತಕಿ ಮೈತ್ರಿ ಪುತ್ತಿಗೆ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಸಬಲೀಕರಣ, ನಾಯಕತ್ವ ಬೆಳವಣಿಗೆಗಾಗಿ ಉಷಾ ಅಂಚನ್‌ರವರ ನೇತೃತ್ವದಲ್ಲಿ ಸಮಾನ ಮನಸ್ಕ ಮಹಿಳೆಯರು ಸೇರಿಕೊಂಡು, ಸಲಹಾ ಸಮಿತಿ ರಚಿಸಿ ಸಂಘ ಆರಂಭಿಸಲಾಗಿದೆ. ಮುಂದೆ ಮಹಿಳೆಯರಿಂದಲೇ ಸಂಘ ಮುನ್ನಡೆಯಲಿದೆ. ಅತಿ ಕಡಿಮೆ ಅವಽಯಲ್ಲಿ ಠೇವಣಿ ಸಂಗ್ರಹ, ಷೇರು ಸಂಗ್ರಹ ಕೆಲಸ ಮಾಡಲಾಗಿದೆ. ಸಂಘದಲ್ಲಿ ಶಿಕ್ಷಣ, ಹೈನುಗಾರಿಕೆಗೆ ಸೇರಿದಂತೆ ೧೮ ರೀತಿಯ ಸಾಲ ನೀಡಲಾಗುವುದು. ಸಂಘ ಉತ್ತುಂಗಕ್ಕೇರಲು ಎಲ್ಲರೂ ಸಹಕರಿಸಬೇಕೆಂದು ಹೇಳಿದರು. ಪ್ರವರ್ತಕಿ ಶ್ರೀಲತಾ ಸಿ.ಹೆಚ್.ಸ್ವಾಗತಿಸಿ, ಇನ್ನೋರ್ವ ಪ್ರವರ್ತಕಿ ಜಯಂತಿ ಬಿ.ನಾಯ್ಕ್ ವಂದಿಸಿದರು. ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ ಪ್ರಾರ್ಥಿಸಿದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ್ ಸೊರಕೆ, ನೆಲ್ಯಾಡಿ ಸಂತಾರ್ಜ್ ವಿದ್ಯಾಸಂಸ್ಥೆಗಳ ಸಂಚಾಲಕ ಅಬ್ರಹಾಂ ವರ್ಗೀಸ್, ಜ್ಯೋತಿಷಿ ಶ್ರೀಧರ ಗೋರೆ, ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಮಧುಸೂದನ್, ಪುತ್ತೂರು ಪ್ರಿಯದರ್ಶಿನಿ ಸಹಕಾರ ಸಂಘದ ಉಪಾಧ್ಯಕ್ಷೆ ಸ್ವರ್ಣಲತಾ, ನಿರ್ದೇಶಕಿಯರಾದ ಸುಮತಿ, ಜಾನಕಿ, ಮುಖ್ಯಕಾರ್ಯನಿರ್ವಹಣಾಽಕಾರಿ ರಾಜೇಶ್, ಪುತ್ತೂರು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕಲಾ, ನೆಲ್ಯಾಡಿ ಎಲೈಟ್ ರಬ್ಬರ್ ಕಂಪನಿ ಮಾಲಕ ಶಾಜಿ ಯು.ವಿ., ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಉಪಾಧ್ಯಕ್ಷ ವಸಂತಪೂಜಾರಿ ಬದಿಬಾಗಿಲು, ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ ಕೆ.ಆಲಂಕಾರು, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಮುಖ್ಯಕಾರ್ಯನಿರ್ವಹಣಾಽಕಾರಿ ಡೀಕಯ್ಯ, ನಿರ್ದೇಶಕರಾದ ಮಾಧವ, ಶಶಿಧರ, ಚೆನ್ನಪ್ಪ, ಮಾಜಿ ಅಧ್ಯಕ್ಷ ಶೇಖರ ಶಿಬಾರ್ಲ, ಮಾಜಿ ನಿರ್ದೇಶಕರಾದ ವಿದ್ಯಾ, ವಿಶ್ವನಾಥ ಎಲಿಯ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷೆ ವನಿತಾ, ಉಪಾಧ್ಯಕ್ಷೆ ಭವಾನಿ ಜಿ., ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಆಲಂಕಾರು ಜ್ಞಾನಸುಧಾ ವಿದ್ಯಾಬೋಧನಾ ಕೇಂದ್ರದ ಸಂಚಾಲಕ ಜನಾರ್ದನ ಬಿ.ಎಲ್. ನೆಲ್ಯಾಡಿ ಶ್ರೀರಾಮ ಶಾಲಾ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಗೌರಿಜಾಲು, ಕೆಪಿಸಿಸಿ ಸದಸ್ಯರಾದ ಕೃಷ್ಣಪ್ಪ, ಕೆ.ಪಿ.ತೋಮಸ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ದಯಾಕರ ರೈ ಮುಂಡಾಳಗುತ್ತು, ನಿವೃತ್ತ ಮುಖ್ಯಕಾರ್ಯನಿರ್ವಹಣಾಽಕಾರಿ ಆನಂದ ಹೆಗ್ಡೆ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯ ಮಾಧವ ಪೂಜಾರಿ ಶಿರಾಡಿ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ದೋಂತಿಲ, ಕೌಕ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ವರ್ಗೀಸ್ ಅಬ್ರಹಾಂ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷರಾದ ಮೋಹನ ಡಿ.ದೋಂತಿಲ, ಶಿವಪ್ರಸಾದ್ ಬೀದಿಮಜಲು, ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಶಿರಾಡಿ ಗ್ರಾ.ಪಂ.ಪಿಡಿಒ ವೆಂಕಟೇಶ್, ಕಾರ್ಯದರ್ಶಿ ಶಾರದಾ, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೆಲ್ಯಾಡಿ ಶಾಖಾ ಸಿಬ್ಬಂದಿಗಳಾದ ವಿನೋದ್, ಮಾನಸ, ಲೋಟಸ್ ಕಾಂಪ್ಲೆಕ್ಸ್ ಮಾಲಕ ಸದಾಶಿವ ಶೆಟ್ಟಿ, ಮೆಸ್ಕಾಂ ನೆಲ್ಯಾಡಿ ಶಾಖಾ ವ್ಯವಸ್ಥಾಪಕ ರಮೇಶ್, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಪ್ರಮುಖರಾದ ಗಣೇಶ್ ರಶ್ಮಿ, ನಾಝೀಂ ಸಾಹೇಬ್, ಸತೀಶ್‌ರೈ ಕೊಣಾಲುಗುತ್ತು, ಸತೀಶ್ ಕೆ.ಎಸ್.ದುರ್ಗಾಶ್ರೀ ಸೇರಿದಂತೆ ನೆಲ್ಯಾಡಿ ವ್ಯಾಪ್ತಿಯ ವರ್ತಕರು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಶಿಕ್ಷಕರು, ಸಹಕಾರ ಸಂಘಗಳ ಸಿಬ್ಬಂದಿಗಳು, ರಾಷ್ಟ್ರೀಕೃತ ಬ್ಯಾಂಕ್‌ನ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಸಂಘದ ಸಲಹಾ ಸಮಿತಿ ಸದಸ್ಯರಾದ ಪಿ.ಪಿ.ವರ್ಗೀಸ್, ಜನಾರ್ದನ ಬಾಣಜಾಲು, ದಿವಾಕರ ಗೌಡ ಶಿರಾಡಿ, ಬಾಬು ಪೂಜಾರಿ ಕಿನ್ಯಡ್ಕ,ಕಲಾವತಿ ರೈ ತೋಟ, ಲಲಿತಾ ನೆಲ್ಯಾಡಿ, ಸಂಘದ ಪ್ರವರ್ತಕರಾದ ಮೇಘನಾಶೈನ್, ಮೈತ್ರಿ ಪುತ್ತಿಗೆ, ರತಿ ಡಿ.ಶಾಂತಿನಗರ, ಶ್ರೀಲತಾ ಸಿ.ಹೆಚ್., ವಿನಿತಾತಂಗಚ್ಚನ್, ಜಯಂತಿ ಬಿ.ನಾಯ್ಕ್, ಸಂಪಾವತಿ ಪಟ್ಟೆಜಾಲು, ಶಾಲಿನಿಶೇಖರ ಪೂಜಾರಿ ಗೋಳಿತ್ತೊಟ್ಟು, ವಾರಿಜಾಕ್ಷಿ ಹೊಸಮನೆ ಕೊಣಾಲು, ಡೈಸಿ ವರ್ಗೀಸ್ ಇಚ್ಲಂಪಾಡಿ, ಪ್ರವೀಣಿಸುಧಾಕರ, ಸಿಬ್ಬಂದಿಗಳಾದ ಚೈತನ್ಯ, ಸ್ವಾತಿವಿನಯ್ ಹಾಗೂ ಇತರರು ಸಹಕರಿಸಿದರು.

ಸನ್ಮಾನ

ಠೇವಣಿದಾರರಾದ ಬಿ.ಸಿ.ರೋಡ್ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ, ನೆಲ್ಯಾಡಿ ಎಲೈಟ್ ರಬ್ಬರ್ ಕಂಪನಿ ಮಾಲಕ ಶಾಜಿ ಯು.ವಿ.ಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ನೆಲ್ಯಾಡಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ಶಿಕ್ಷಕ ಕುಶಾಲಪ್ಪ ನೆಲ್ಯಾಡಿಯವರನ್ನು ಸನ್ಮಾನಿಸಲಾಯಿತು. ಸಂಘದ ಸಿಬ್ಬಂದಿಗಳಿಗೆ ತರಬೇತಿ ನೀಡಿದ ಪುತ್ತೂರು ಪ್ರಿಯದರ್ಶಿನಿ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ರಾಜೇಶ್‌ರವರನ್ನು ಗೌರವಿಸಲಾಯಿತು. ಅತೀ ಹೆಚ್ಚು ಷೇರು ಸಂಗ್ರಹ ಮಾಡಿದ ಪ್ರವರ್ತಕಿ ಮೇಘನಾಶೈನ್‌ರವರನ್ನು ಗೌರವಿಸಲಾಯಿತು. ಸಂಘದ ಸಲಹಾ ಸಮಿತಿ ಸದಸ್ಯರನ್ನು, ಪ್ರವರ್ತಕರನ್ನು, ಸಿಬ್ಬಂದಿಗಳನ್ನು, ಸಂಘದ ಆರಂಭಕ್ಕೆ ಸಹಕಾರ ನೀಡಿದವರನ್ನು ಮುಖ್ಯಪ್ರವರ್ತಕಿ ಉಷಾ ಅಂಚನ್‌ರವರು ಶಾಲು ಹಾಕಿ ಗೌರವಿಸಿದರು. ಪ್ರಥಮ ಷೇರುಪತ್ರವನ್ನು ಪ್ರಜ್ಞಾರವರಿಗೆ ವಿತರಿಸಲಾಯಿತು.

ಗಣಹೋಮ, ಲಕ್ಷ್ಮೀಪೂಜೆ: ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ ನಡೆಯಿತು. ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಅರ್ಚಕ ಶ್ರೀಧರ ನೂಜಿನ್ನಾಯರವರ ನೇತೃತ್ವದಲ್ಲಿ ಪೂಜಾ ವಿಽವಿಧಾನ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಭಾ ಕಾರ್ಯಕ್ರಮಕ್ಕೆ ಮೊದಲು ನೆಲ್ಯಾಡಿಯ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here