ಕೆಮ್ಮಾರ ಶಂಸುಲ್ ಉಲಮಾ ವಿದ್ಯಾಸಂಸ್ಥೆಯಲ್ಲಿ ಮಜ್ಲಿಸುನ್ನೂರು ‘ಆಧ್ಯಾತ್ಮಿಕ ಸಂಗಮ

0

ಕಡಬ : ಕೆಮ್ಮಾರ ಶಕ್ತಿ ನಗರದಲ್ಲಿರುವ ಶಂಸುಲ್ ಉಲಮಾ ದುವಾ ಹಾಗೂ ಶರೀಅತ್ ಕಾಲೇಜ್ ನಲ್ಲಿ ಮಜ್ಜಿಸುನ್ನೂರು ‘ಆಧ್ಯಾತ್ಮಿಕ ಸಂಗಮ’ ವು ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಅವರು ನೇತೃತ್ವ ನೀಡಿದರು.

ದಾರಿಮೀಸ್ ರಾಜ್ಯ ಮುಖಂಡ ಕೆ.ಆರ್.ಹುಸೈನ್ ದಾರಿಮಿ ಅವರು ಮುಖ್ಯ ಭಾಷಣ ನಡೆಸಿ, ವಿದ್ಯಾಸಂಸ್ಥೆಯ ಕಾರ್ಯಸಾಧನೆಯನ್ನು ಪ್ರಶಂಸಿಸಿದರು. ಸಮಾರಂಭದಲ್ಲಿ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿಯ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಶೌಕತ್ತಲಿ ಫೈಝಿ ಗಂಡಿಬಾಗಿಲು, ಹನೀಫ್ ದಾರಿಮಿ ಪಡೀಲ್,ಅಯ್ಯೂಬ್ ಬಾಅಹ್ಸನಿ, ಹಸೈನಾರ್ ಹಾಜಿ ಕೊಯ್ಲ, ಹುಸೈನ್ ಬಡಿಲ, ರಝಾಕ್ ದಾರಿಮಿ ಮೇನಾಲ, ಇಸ್ಮಾಯಿಲ್ ,ಎನ್ ಇಸ್ಹಾಕ್,ನ್ಯಾಯವಾದಿ ಕಬೀರ್ ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು.ಅಬ್ದುಲ್ ರಝಾಕ್ ದಾರಿಮಿ ವಂದಿಸಿದರು.

LEAVE A REPLY

Please enter your comment!
Please enter your name here