ಮೈಸೂರು ವಿಭಾಗೀಯ ಐಟಿ ಕ್ವಿಜ್ ಸ್ಪರ್ಧೆಗೆ ಫಿಲೋಮಿನಾ ಪ್ರೌಢಶಾಲೆಯ ನಿಕ್ಷೇಪ್ ಕೃಷ್ಣ ಆಯ್ಕೆ

0

ಪುತ್ತೂರು:ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನ ಕಪಿತಾನಿಯೋ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯ ಶಾಲಾ ನಾಯಕ ನಿಕ್ಷೇಪ್ ಕೃಷ್ಣ(10ನೇ ತರಗತಿ)ರವರು ವಿಜೇತರಾಗಿದ್ದು ಮೈಸೂರು ವಿಭಾಗೀಯ ಐಟಿ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ನಿಕ್ಷೇಪ್ ಕೃಷ್ಣರವರು ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಉದ್ಯೋಗಿ ಉದಯ ಕುಮಾರ್ ಹಾಗೂ ಅನ್ನಪೂರ್ಣೇಶ್ವರಿ ಪಿ.ರವರ ಪುತ್ರ.

LEAVE A REPLY

Please enter your comment!
Please enter your name here