ಕಳ್ಳರ ಹಾದಿಯನ್ನು ಬೆನ್ನಟ್ಟಿದ ರಾಕಿ(ಶ್ವಾನದಳ) ..!!

0

ಪುತ್ತೂರು: ಕಳವು ಪ್ರಕರಣಕ್ಕೆ ಸಂಬಂಧಿಸಿ ಶ್ವಾನದಳದ ವಿಶೇಷ ತರಬೇತಿ ಹೊಂದಿದ ರಾಕಿ (ಡೊಬರ್‌ಮೆನ್), ಬೆರಳಚ್ಚು ತಜ್ಞರ ತಂಡ ಪ್ರಕಾಶ್ ಫೂಟ್‌ವೇರ್‌ಗೆ ಆಗಮಿಸಿದ್ದು, ರಾಕಿಯು ಫೂಟ್‌ವೇರ್‌ನ ಒಳಗೆ ಕಳ್ಳರ ವಾಸನೆ ಹಿಡಿದು ಮುಖ್ಯರಸ್ತೆಯಾಗಿ ಬಸ್‌ನಿಲ್ದಾಣಕ್ಕೆ ಹೋಗುವ ರಸ್ತೆಯಾಗಿ ಡಾ| ಶಿವರಾಮ ಕಾರಂತ ಪ್ರೌಢಶಾಲೆಯ ವಠಾರಕ್ಕೆ ಹೋಗಿ ಅಲ್ಲಿಂದ ಶಾಲೆಯ ಆವರಣಗೋಡೆಯ ಬದಿಯಲ್ಲಿರುವ ಫೂಟ್‌ವೇರ್ ಅಂಗಡಿಯ ಹಿಂಬದಿಯ ಗೋಡೆಯನ್ನು ನೋಡಿ ನಿಂತಿತ್ತು. ಇದಾದ ಬಳಿಕ ಬೆರಳಚ್ಚು ತಜ್ಞರು ಅಂಗಡಿಯಲ್ಲಿ ಕೆಲವೊಂದು ಪ್ರಮುಖ ಸಾಕ್ಷ್ಯಾದಾರಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಪುತ್ತೂರು ಪ್ರಕಾಶ್ ಫೂಟ್‌ವೇರ್‌ನಿಂದ ಕಳ್ಳತನ – ಇನ್ನೋವ ಕಾರು ಖರೀದಿಗೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು

LEAVE A REPLY

Please enter your comment!
Please enter your name here