ಸೆ.24: ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ವಾಣಿಜ್ಯ ಸಂಕೀರ್ಣ, ಕಚೇರಿ ಉದ್ಘಾಟನೆ

0

  • ಮಠಂದೂರು, ಕಟೀಲ್, ಡಿ.ವಿ.ಎಸ್, ಸೋಮಶೇಖರ್, ಸುನೀಲ್ ಕುಮಾರ್, ಅಂಗಾರ, , ಡಾ.ಎಂ.ಎನ್.ಆರ್ ಸಹಿತ ಅನೇಕ ಗಣ್ಯರ ಆಗಮನ

ಪುತ್ತೂರು: ಪುತ್ತೂರು ಪಿಎಲ್‌ಡಿ ಬ್ಯಾಂಕ್ ಇದರ ನೂತನ ವಾಣಿಜ್ಯ ಸಂಕೀರ್ಣ ಮತ್ತು ಕಚೇರಿ ಉದ್ಘಾಟನೆಯು ಸೆ. ೨೪ ರಂದು ನಡೆಯಲಿದ್ದು, ಸಭಾ ಕಾರ್‍ಯಕ್ರಮವು ಬೆಳಿಗ್ಗೆ 10.30ಕ್ಕೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ. ಸಮಾರಂಭದಲ್ಲಿಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಚಿವರಾದ ಎಚ್.ಟಿ.ಸೋಮಶೇಖರ್, ಸುನೀಲ್ ಕುಮಾರ್, ಎಸ್.ಅಂಗಾರ, , ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿ, ಉಪಾಧ್ಯಕ್ಷೆ ಸುಜಾತ ರಂಜನ್ ರೈ, ಕೋಶಾಧಿಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ವ್ಯವಸ್ಥಾಪಕ ಶೇಖರ್ ಎಂ ಹಾಗೂ ನಿರ್ದೇಶಕರುಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here