ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರಾಮಕುಂಜೇಶ್ವರ ಪ. ಪೂ. ಕಾಲೇಜಿನ ಎನ್.ಎಸ್.ಎಸ್ ಶಿಬಿರಾರ್ಥಿಗಳಿಂದ ಸ್ವಚ್ಚತೆ

0

ಆಲಂಕಾರು: ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವಾರ್ಷಿಕ ಶಿಬಿರವು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನಲ್ಲಿ ಆ 2 ರಿಂದ ಪ್ರಾರಂಭಗೊಂಡಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಸ್ಚಚ್ಚತೆ ನೆರವೆರಿಸಿದರು.


ವಾರ್ಷಿಕ ಶಿಬಿರದಲ್ಲಿ 50 ಮಂದಿ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸ್ವಚ್ಚತೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಶಿಬಿರಾಧಿಕಾರಿ ತಿಲಕಾಕ್ಷ, , ಸಹಶಿಬಿರಾಧಿಕಾರಿ ಸತೀಶ್ ಕುಮಾರ್ ಜಿ.ಆರ್ ಬೋಧಕ, ಬೋಧಕೇತರ ವರ್ಗದ ಮಲ್ಲಿಕಾ, ಸುಧೀಂದ್ರ ಜಿ, ಸವಿತಾ,ತನುಜ,ಚೈತ್ರ,ಭರತ್,ಚೇತನ್ ಮೊಗ್ರಾಲ್, ಹರಿಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು .ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ ದಾಮೋದರ ಗೌಡ ಕಕ್ವೆ ಸ್ವಾಗತಿಸಿ,ಧನ್ಯವಾದ ಸಮರ್ಪಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here