ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು:ಪುತ್ತೂರು ವಾಣಿಜ್ಯ, ಕೈಗಾರಿಕಾ ಸಂಘದ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಜಾನ್ ಕುಟಿನ್ಹಾ ಅವರನ್ನು ಪುನರಾಯ್ಕೆ ಮಾಡಲಾಗಿದೆ.

ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಅವರ ಅಧ್ಯಕ್ಷತೆಯಲ್ಲಿ ಅ.2ರಂದು ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಸಂಘದ 42ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಽಕಾರಿಗಳ ಆಯ್ಕೆ ನಡೆಯಿತು.ಪ್ರಧಾನ ಕಾರ್ಯದರ್ಶಿಯಾಗಿ ಉಲ್ಲಾಸ್ ಪೈ, ಕೋಶಾಧಿಕಾರಿಯಾಗಿ ರಾಜೇಶ್ ಕಾಮತ್, ಉಪಾಧ್ಯಕ್ಷರಾಗಿ ಪಿ.ವಾಮನ ಪೈ, ಸೂರ್ಯನಾಥ ಆಳ್ವ, ಜೊತೆ ಕಾರ್ಯದರ್ಶಿಯಾಗಿ ಮನೋಜ್ ಟಿ.ವಿ. ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿಗೆ ವಿಶ್ವಪ್ರಸಾದ್ ಸೇಡಿಯಾಪು, ಶ್ರೀಕಾಂತ್ ಕೊಳತ್ತಾಯ,ಕೃಷ್ಣನಾರಾಯಣ ಮುಳಿಯ, ಉಮೇಶ್ ನಾಯಕ್, ಅರವಿಂದ ಭಗವಾನ್ ರೈ, ಇಂದುಶೇಖರ್ ಪಿ.ಬಿ.,ಶಶಿರಾಜ್ ರೈ, ಆಸ್ಕರ್ ಆನಂದ್, ಗುರುರಾಜ್ ಕೆ.,ನಾಗೇಶ್, ಸಂತೋಷ್ ಶೆಟ್ಟಿ,ಸದಾನಂದ ಎ.,ಉಮ್ಮರ್ ಫಾರೂಕ್, ಮೊಹಮ್ಮದ್ ನೌಷಾದ್, ರಾಜೇಶ್ ಯು.ಪಿ., ಮೊಹಮ್ಮದ್ ರಫೀಕ್, ಸತೀಶ್ ನಾಯ್ಕ್ ಪರ್ಲಡ್ಕ,ರಮೇಶ್ ಪ್ರಭು, ರಾಮಚಂದ್ರ ನಾಯಕ್, ಗೋಪಾಲ್ ಎಂ.ಯು.,ರವೀಂದ್ರ ಪೈ, ರವಿಚಂದ್ರ, ಉದಯ ಕುಮಾರ್ ಹೆಚ್.,ಕಾನೂನು ಸಲಹೆಗಾರರಾಗಿ ವಕೀಲ, ನೋಟರಿ -ಝಲ್ ರಹೀಂ ಮತ್ತು ಲೆಕ್ಕಪರಿಶೋಧಕರಾಗಿ ಗಣೇಶ್ ಜ್ಯೋಷಿ ಅವರನ್ನು ಆಯ್ಕೆ ಮಾಡಲಾಯಿತು.ಸಂಘದ ಮಾಜಿ ಅಧ್ಯಕ್ಷ ಸುರೇಂದ್ರ ಕಿಣಿ ಅವರು ಚುನಾವಣಾಧಿಕಾರಿಯಾಗಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here