ಪ್ರಾಣಿ ಪ್ರಿಯ ರಾಜೇಶ್ ಬನ್ನೂರುರವರಿಗೆ ರೋಟರಿ ಸೆಂಟ್ರಲ್ ನಿಂದ ಗೌರವಾರ್ಪಣೆ

0

ಪುತ್ತೂರು:ಪುತ್ತೂರು ಪಟ್ಟಣದ ಆಸುಪಾಸಿನಲ್ಲಿರುವ ಬೀದಿನಾಯಿಗಳಿಗೆ ನಿರಂತರ 15 ವರ್ಷದಿಂದ ಅನ್ನ ನೀಡುವ ಪುತ್ತೂರು ಪುರಸಭೆಯ ಮಾಜಿ ಅದ್ಯಕ್ಷರಾಗಿದ್ದ ರಾಜೇಶ್ ಬನ್ನೂರು ರವರನ್ನು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ಗೌರವಿಸಲಾಯಿತು.
ರಾಜೇಶ್ ಬನ್ನೂರುರವರು ತನ್ನ‌ ಅನುಭವವನ್ನು ಹಂಚಿಕೊಳ್ಳುತ್ತಾ ‘ ಬೀದಿ ನಾಯಿಗಳಿಗೆ ಆಹಾರ ನೀಡಲು ಪ್ರತಿದಿನ 2500 ರೂಪಾಯಿ ವೆಚ್ಚವಾಗುತ್ತಿದ್ದು ಸುಮಾರು 150ಕ್ಕಿಂತಲೂ ಹೆಚ್ಚು ನಾಯಿಗಳಿಗೆ ಆಹಾರ ನೀಡುತ್ತಿದ್ದೇನೆ. ಕಳೆದ 15 ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಿದ್ದು ಇದುವರೆಗೆ ದಾನಿಗಳಿಂದ ಸುಮಾರು ರುಪಾಯಿ ಐವತ್ತು ಸಾವಿರದಷ್ಟು ಕೊಡುಗೆ ಲಭಿಸಿದೆ.ಬೀದಿ ನಾಯಿಗಳಿಗೆ ಆಹಾರವಷ್ಟೇ ಅಲ್ಲ, ಅವುಗಳ ಆರೋಗ್ಯದ ಕಡೆಗೂ ಗಮನ ನೀಡುತ್ತಿದ್ದೇನೆ. ಆರ್ಥಿಕ ವೆಚ್ಚವನ್ನು ಸರಿದೂಗಿಸಲು ಕಷ್ಡವಾಗುತ್ತಿದ್ದು , ಆಹಾರ ನೀಡುವ ಕಾರ್ಯವನ್ನು ನಿಲ್ಲಿಸುವ ಕುರಿತು ಚಿಂತಿಸಿದರೂ ಸಾಧುಪ್ರಾಣಿಗಳು ವ್ಯಕ್ತಪಡಿಸುವ ಪ್ರೀತಿಗೆ ಕಟ್ಟು ಬಿದ್ದು ಮತ್ತೆ ಮುಂದುವರಿಸಿದ್ದೇನೆ . ತಾನು ಅತ್ಯಂತ ಸರಳವಾಗಿ ಬದುಕುತ್ತಿದ್ದು ,ನನ್ನ ಆದಾಯ ಮತ್ತು ಮನೆಯ ಆದಾಯವನ್ನೂ ಇದಕ್ಕಾಗಿ ವಿನಿಯೋಗಿಸುತ್ತಿದ್ದೇನೆ ಎಂದು ತಿಳಿಸಿದರು. ಮನೆಯಲ್ಲಿ ನಾಯಿಯನ್ನು ಆರೈಕೆ ಮಾಡುವ ರೀತಿ, ಔಷಧೋಪಚಾರ ಮತ್ತು ಅವುಗಳಿಗೆ ಬರುವ ರೋಗಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸೆ೦ಟ್ರಲ್ ಅದ್ಯಕ್ಷರಾದ ಮೊಹಮ್ಮದ್ ರಫೀಕ್ ದರ್ಬೆ,ಕಾರ್ಯದರ್ಶಿ ಚಂದ್ರಹಾಸ ರೈ ಒಕೇಶನಲ್ ಸರ್ವಿಸ್ ಡೈರೆಕ್ಟರ್ ಡಾ. ರಾಜೇಶ್ ಬೆಜ್ಜಂಗಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here