ಅಮ್ಚಿನಡ್ಕ:ರಸ್ತೆ ತಡೆಬೇಲಿಗೆ ಡಿಕ್ಕಿಯಾದ ಕಾರು

0

ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಅಮ್ಚಿನಡ್ಕದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತಡೆ ಬೇಲಿಗೆ ಡಿಕ್ಕಿಯಾದ ಘಟನೆ ಅ.20ರ ಸಂಜೆ ನಡೆದಿದೆ.

ಮಡಿಕೇರಿಯಿಂದ ಮಂಗಳೂರು ಕಡೆ ತೆರಳುತ್ತಿದ್ದ ಕಾರು ರಸ್ತೆ ತಡೆಬೇಲಿಗೆ ಡಿಕ್ಕಿಯಾಗಿದೆ. ಘಟನೆಯಿಂದ ಕಾರಿನಲ್ಲಿದ್ದ ವಿಶಾಖಪಟ್ಟಣ ನಿವಾಸಿಯಾಗಿರುವ ಮಂಗಳೂರು ಆಸ್ಪತ್ರೆಯ ವೈದ್ಯರೊಬ್ಬರ ಸಹಿತ ಮೂವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here