ಶ್ರೀರಾಮ ಗೆಳೆಯರ ಬಳಗದಿಂದ ಪುರುಷ ಮತ್ತು ಮಹಿಳೆಯರ ಮುಕ್ತ ಹಗ್ಗಜಗ್ಗಾಟ ಪಂದ್ಯಾಟ-ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಶ್ರೀರಾಮ ಗೆಳೆಯರ ಬಳಗ (ರಿ )ಪುತ್ತಿಲ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ನ.6 ರಂದು ಪುರುಷ ಮತ್ತು ಮಹಿಳೆಯರ 7 ಜನರ ಮುಕ್ತ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಅ.26ರಂದು ಶ್ರೀರಾಮ ಕ್ರೀಡಾಂಗಣದಲ್ಲಿ ನಡೆಯಿತು.

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಹಾಲು ಉತ್ಪದಕ ಸಹಕಾರಿ ಸಂಘದ ನಿರ್ದೇಶಕರು ಅನಿಲ್ ಕುಮಾರ್ ಕಣ್ಣಾರ್ನೂಜಿ, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲಚಂದ್ರ ಗೌಡ ಕಡ್ಯ, ಕರಮನೆ ಕಟ್ಟೆ ಹಾಲು ಉತ್ಪದಕ ಸಹಕಾರಿ ಸಂಘದ ನಿರ್ದೇಶಕ ವಿಜಯ್ ಕುಮಾರ್ ಜೈನ್, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ ಬಿ.ಕೆ, ಕರೆಮನೆಕಟ್ಟೆ ಹಾಲು ಉತ್ಪದಕ ಸಹಕಾರಿ ಸಂಘದ ಕಾರ್ಯದರ್ಶಿ ಶ್ವೇತಾ, ಸಹಾಯಕಿ ವೇದಾವತಿ, ಸ್ಥಳೀಯರಾದ ರಮೇಶ್ ಟೈಲರ್ ನಾಡಜೆ, ಶ್ರೀರಾಮ ಗೆಳೆಯರ ಬಳಗದ ನಿಯೋಜಿತ ಅಧ್ಯಕ್ಷ ಪುರುಷೋತ್ತಮ್ ಬಿ ಕೆ, ಸದಸ್ಯರಾದ ಪುರಂದರ ಗೌಡ ನಡುಬೈಲು, ರಾಧಾಕೃಷ್ಣ ಪುತ್ತಿಲ, ರುಕ್ಮಯ ಕೆದಗೆದಡಿ, ಪ್ರತೀಕ್ ಪುತ್ತಿಲ, ವಿನಯ್ ಪುತ್ತಿಲ, ಜಗದೀಶ್ ಕಲ್ಲಮ, ಅವಿನಾಶ್ ಕೆದಗೆದಡಿ, ಸತೀಶ್ ಬಿ.ಕೆ, ಸಂತೋಷ್ ಕಡ್ಯ, ಅಭಿಷೇಕ್ ಕಲ್ಲಮ, ಧನಂಜಯ ಕಲ್ಲಮ, ಧನುಷ್, ವಿವೇಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here