ಸರ್ವೆ ವಲಯ ಕಾಂಗ್ರೆಸ್ ಸಭೆ

0

ಸರ್ವೆ: ಸರ್ವೆ ವಲಯ ಕಾಂಗ್ರೆಸ್ ಸಭೆ ವಲಯಾಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆಯಲ್ಲಿ ಕಲ್ಪಣೆ ಸಮುದಾಯ ಭವನದಲ್ಲಿ ನಡೆಯಿತು.

ಪಕ್ಷದ ಸಂಘಟನೆಗೆ ಒತ್ತು ಕೊಟ್ಟು ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಮೂಲಕ ರಾಜ್ಯದಲ್ಲಿ ಹಾಗೂ ಪುತ್ತೂರಿನಲ್ಲಿ ಪಕ್ಷ ಗೆದ್ದು ಬರುವಂತೆ ಪ್ರಯತ್ನಿಸಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಬಿ.ವಿಶ್ವನಾಥ ರೈ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಮತ್ತು ಪುತ್ತೂರಿಗೆ ನಮ್ಮ ಪಕ್ಷದ ಶಾಸಕರನ್ನು ತರುವುದೇ ನಮ್ಮ ಗುರಿ ಎಂದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.

ಕೆಪಿಸಿಸಿ ವಕ್ತಾರರಾದ ಅಮಳ ರಾಮಚಂದ್ರ ಭಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ವಲಯ ಉಸ್ತುವಾರಿ ಯಾಕೂಬ್ ಮುಲಾರ್, ಬೂತ್ ಅಧ್ಯಕ್ಷರಾದ ಯತೀಶ್ ರೈ, ಮಜೀದ್ ಬಾಳಾಯ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮರಿಯ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ವಿಜಯ ಕರ್ಮಿನಡ್ಕ, ಕಮಲ ನೇರೋಳ್ತಡ್ಕ, ಮಾಜಿ ತಾ.ಪಂ ಸದಸ್ಯೆ ಸುಮತಿ, ಬ್ಲಾಕ್ ಮಟ್ಟದ ಕಾಂಗ್ರೆಸ್ ನಾಯಕರಾದ ರಾಜೇಶ್ ಎಸ್. ಡಿ, ಹಂಝ ಕೂಡುರಸ್ತೆ, ಅಝೀಝ್ ರೆಂಜಲಾಡಿ, ಸಂಜೀವ ನಾಯ್ಕ್ ಸೊರಕೆ, ಗೌತಮ್ ಪಟ್ಟೆಮಜಲು, ಶಶಿಧರ್ ಎಸ್. ಡಿ, ಯೋಗಿನಿ ರೈ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಉಪಾದ್ಯಕ್ಷ ಸುಪ್ರೀತ್ ಕಣ್ಣಾರಾಯ, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಸೊರಕೆ, ಕಿರಣ್ ಎಸ್. ಡಿ, ಸಾಂತಪ್ಪ ಕಲ್ಕಾರ್, ಇಸ್ಮಾಯಿಲ್ ಕಟ್ಟತ್ತಡ್ಕ, ಶರೀಫ್ ಎಸ್. ಎಂ, ಅಬ್ದುಲ್ ರಹೀಂ ರೆಂಜಲಾಡಿ, ಆಸಿಫ್ ಮುಂಡೂರು ಉಪಸ್ಥಿತರಿದ್ದರು.

ಕೆಪಿಸಿಸಿ ವಕ್ತಾರರಾಗಿ ಆಯ್ಕೆಯಾದ ಅಮಳ ರಾಮಚಂದ್ರ ಭಟ್ ಅವರನ್ನು ವಲಯ ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು. ವಲಯ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ಮಜೀದ್ ಬಾಳಾಯ ವಂದಿಸಿದರು.

LEAVE A REPLY

Please enter your comment!
Please enter your name here