ದ.ಕ. ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯಲ್ಲಿ ವಿಲೇವಾರಿಯಾಗದ ಕಡತ ಸವಣೂರು ಪಿಲಿಂಗೂರು ಪಿ.ಎನ್.ಕೃಷ್ಣ ಭಟ್‌ರವರಿಂದ ಸಚಿವ ಸುನಿಲ್ ಕುಮಾರ್‌ಗೆ ಮನವಿ

0

ಪುತ್ತೂರು : ದ.ಕ. ಜಿಲ್ಲಾಧಿಕಾರಿ ಕಛೇರಿಯ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿಯಲ್ಲಿ ಕಡತ ವಿಲೇ ಇರುವ ಬಗ್ಗೆ ಸವಣೂರು ಪಿಲಿಂಗೂರು ಮನೆಯ ಪಿ.ಎನ್.ಕೃಷ್ಣ ಭಟ್‌ರವರು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್‌ರವರಿಗೆ ಮನವಿ ಸಲ್ಲಿಸಿದ್ದಾರೆ.

ಕಡಬ ತಾಲೂಕಿನ ಸವಣೂರು ಗ್ರಾಮದ ಸ.ನಂಬ್ರ 203/2ನೇ ಆಸ್ತಿಯ ಆಕಾರ್ ಬಂದು ದುರಸ್ತಿಪಡಿಸುವಂತೆ ನಾನು ಕಡಬ ಭೂದಾಖಲೆಗಳ ಕಛೇರಿಯವರಿಗೆ ಮನವಿ ಸಲ್ಲಿಸಿದಂತೆ ಅವರು ತನಿಖೆ ನಡೆಸಿ ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು, ಜಿಲ್ಲಾಧಿಕಾರಿಯವರ ಕಛೇರಿ ಮಂಗಳೂರು ಇವರಿಗೆ ದಿನಾಂಕ 30/08/2022ರಂದು ಕಡತ ನಂಬ್ರ ಭೂ.ಸ.ನಿ.ಎಲ್.ಕೆ.ಆರ್. 19/22-23 ರಂತೆ ಕಡತ ಕಳುಹಿಸಿರುತ್ತಾರೆ. ಸದ್ರಿ ಕಡತ ಕಳುಹಿಸಿ ತಿಂಗಳು 2 ಕಳೆದರೂ ಕೂಡಾ ಸದ್ರಿಯವರು ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿರುವುದು ಕಂಡು ಬಂದಿರುವುದಿಲ್ಲ. ವಿಚಾರಿಸುವ ಬಗ್ಗೆ ನಾನು ಸದ್ರಿ ಕಚೇರಿಗೆ 2, 3 ಬಾರಿ ಭೇಟಿ ನೀಡಿ ವಿಚಾರಿಸಿದರೂ ಯಾವುದೇ ರೀತಿಯ ಸಮರ್ಪಕವಾದ ಉತ್ತರವನ್ನು ನೀಡದೇ ಉಡಾಫೆ ಮಾತನಾಡಿರುತ್ತಾರೆ. ಕೃಷ್ಣಭಟ್ ಅವರು ತಾವುಗಳು ತಕ್ಷಣ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಾವು ಸಂಬಂಧಪಟ್ಟವರಿಗೆ ಆದೇಶ ಮಾಡಿ ನನ್ನ ಆಸ್ತಿಯ ಪ್ಲಾಟಿಂಗ್ ಆಗಿ ನಕ್ಷೆ ಒದಗಿಸುವರೇ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here