ಸರ್ವೆ: ಎಲಿಯದಲ್ಲಿ ನಂದಗೋಕುಲ ಸ್ವಸಹಾಯ ಸಂಘ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟ ವ್ಯಾಪ್ತಿಯ ಎಲಿಯ ಎಂಬಲ್ಲಿ ನೂತನವಾಗಿ `ನಂದಗೋಕುಲ’ ಸ್ವಸಹಾಯ ಸಂಘವನ್ನು ಕರುಣಾಕರ ಗೌಡ ಎಲಿಯರವರ ಮನೆಯಲ್ಲಿ ಪ್ರಗತಿಪರ ಕೃಷಿಕರಾದ ಹೊನ್ನಪ್ಪ ಗೌಡ ಎಲಿಯ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ನೂತನ ತಂಡಕ್ಕೆ ಶುಭ ಹಾರೈಸಿದರು. ಕೆಮ್ಮಿಂಜೆ ವಲಯ ಮೇಲ್ವಿಚಾರಕರಾದ ಮೋಹಿನಿ ಅವರು ಯೋಜನೆ ಹಾಗೂ ತಂಡದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಲೆಕ್ಕ ಪರಿಶೋಧಕರಾದ ಲತಾ ಉಪಸ್ಥಿತರಿದ್ದರು.
ತಂಡದ ಸದಸ್ಯರಾದ ಕರುಣಾಕರ ಗೌಡ, ನಿಶಾಂತ್ ಎ.ವಿ, ರವಿಕುಮಾರ್ ಎಂ, ಸೌಮ್ಯ ವೈ, ಹೇಮಲತಾ ವೈ, ತೀರ್ಥ ಪ್ರಸಾದ್, ಸುಗುಣ, ಇಸುಬು, ಪೂಮಲಾರು, ಪಿ ಅಬ್ದುಲ್ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ರೇಖಾ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here