ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕಡಬದ ವೇದಿಕ್ ಕೌಶಲ್ ಆಯ್ಕೆ

0

ಕಡಬ:ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕಡಬದ ವೇದಿಕ್ ಕೌಶಲ್ ಆಯ್ಕೆಯಾಗಿದ್ದಾರೆ.

ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ನೀಡುತ್ತಿರುವ ಎರಡನೇ ವರ್ಷದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕಡಬ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ವೇದಿಕ್ ಕೌಶಲ್ ಆಯ್ಕೆಯಾಗಿದ್ದಾರೆ.

ವೇದಿಕ್ ಕೌಶಲ್ ಅವರು ಕೆಲವು ತಿಂಗಳ ಹಿಂದೆ ಝೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್-4ರಿಯಾಲಿಟಿ ಶೋದಲ್ಲಿ ರನ್ನರ್‍ಸ್ ಸ್ಥಾನ ಪಡೆದು ಗಮನ ಸೆಳೆದಿದ್ದರು. ಇವರು ಕಡಬ ನಿವಾಸಿ ಮಹದೇವಪ್ಪ ಮತ್ತು ಕಡಬ ವಾಳ್ಯ ಸ.ಕಿ.ಪ್ರಾ.ಶಾಲೆಯ ಶಿಕ್ಷಕಿ ಮಂಜುಳಾ ಯು ಅವರ ಪುತ್ರ.

LEAVE A REPLY

Please enter your comment!
Please enter your name here