ತಾ|ಸರಕಾರಿ ನೌಕರರ ಸಂಘದ ಉಪ ಚುನಾವಣೆ

0

ವರುಣ್ ಕುಮಾರ್, ದೀಪಿಕಾ ವಾಗ್ಳೆ, ಚೆನ್ನಪ್ಪ ಗೌಡ, ಸುಲೋಚನಾ ಪಿ.ಕೆ ಆಯ್ಕೆ

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಪುತ್ತೂರು ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರ ನಿವೃತ್ತಿ ಮತ್ತು ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ 2020-24ನೇ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಗಳಿಗೆ ನ.21 ರಿಂದ 25 ರ ತನಕ ಉಪ ಚುನಾವಣಾ ಪ್ರಕ್ರಿಯೆ ಜರಗಿದ್ದು, ನಾಲ್ಕು ಮಂದಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಆರೋಗ್ಯ ಇಲಾಖೆ(ಸಾರ್ವಜನಿಕ ಆಸ್ಪತ್ರೆ)ಯಿಂದ ಫಿಸಿಯೋಥೆರಪಿಸ್ಟ್ ದೀಪಿಕಾ ಜೆ.ವಾಗ್ಳೆ, ಕಂದಾಯ ಇಲಾಖೆಯಿಂದ ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಹಾಗೂ ಪುತ್ತೂರಿನ ಉಪ ತಹಶೀಲ್ದಾರ್ ಸುಲೋಚನಾ ಪಿ.ಕೆ, ವಾಣಿಜ್ಯ ತೆರಿಗೆ ಇಲಾಖೆಯಿಂದ ದ್ವಿತೀಯ ದರ್ಜೆ ಸಹಾಯಕ ವರುಣ್ ಕುಮಾರ್ ಬಿ.ರವರು ನೇಮಕಗೊಂಡಿದ್ದಾರೆ.

ನ.25 ರಂದು ಸರಕಾರಿ ನೌಕರರ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ನೂತನವಾಗಿ ನೇಮಕಗೊಂಡ ಸದಸ್ಯರಿಗೆ ಪ್ರಮಾಣಪತ್ರ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಕೋಶಾಧಿಕಾರಿ ನಾಗೇಶ್ ಕೆ ಸಹಿತ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here