ಡಿ.11 ರಂದು ಆಲಂಕಾರು ವಲಯ ಬಂಟರ ಸಂಘದ ಅಶ್ರಯದಲ್ಲಿ ಬಂಟರ ಸಮಾವೇಶ,ವಿದ್ಯಾರ್ಥಿ ವೇತನ,ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0

ಆಲಂಕಾರು:ಆಲಂಕಾರು ವಲಯ ಬಂಟರ ಸಂಘದ ಅಶ್ರಯದಲ್ಲಿ ಬಂಟರ ಸಮಾವೇಶ,ವಿದ್ಯಾರ್ಥಿ ವೇತನ,ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮಮನ್ನಾಚರಿಸಿದ ದಂಪತಿಗಳಿಗೆ ಗೌರವಾರ್ಪಣೆ ಹಾಗು ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  ಡಿ.11 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನಾ ದಯಾಳು ರೈತ ಸಭಾಭವನದಲ್ಲಿ ನಡೆಯಲಿದೆ.

ಸಭಾಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ ಕೆಯವರು ವಹಿಸಲಿದ್ದು.ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೋಟ್ಟು,ಉದ್ಯಮಿಗಳಾದ ಅಶೋಕ ಕುಮಾರ್ ರೈ ಕೋಡಿಂಬಾಡಿ ರೈ ಎಸ್ಟೇಟ್,ಮುಂಬಯಿಯ ಉದ್ಯಮಿಗಳಾದ ಪಟ್ಟೆಗುತ್ತು ಜಯಪ್ರಕಾಶ್ ರೈ,ಕೃಷಿ ಪ್ರಶಸ್ತಿ ಪುರಸ್ಕೃತರಾದ ಸುಭಾಸ್ ಕುಮಾರ್ ಶೆಟ್ಟಿ ಆರುವಾರ ಭಾಗವಹಿಸಲಿದ್ದಾರೆ ಎಂದು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಸೇಸಪ್ಪ ರೈ .ಕೆ ,ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಹಾಗು ಪದಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here