ಕಾಮಧೇನು ಗೋಶಾಲೆಯ ಶುದ್ದ ಕಪಿಲೆ ಹಸುವಿನ ದತ್ತು ಸ್ವೀಕಾರ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿರುವ ಗೋವಿನ ಸಾಕಣಿಕಾ ವೆಚ್ಚಕ್ಕೆ ಸಂಬಂಧಿಸಿ ಈಗಾಗಲೇ ಭಕ್ತರು ದತ್ತು ಸ್ವೀಕಾರಕ್ಕೆ ಮುಂದೆ ಬಂದಿದ್ದು, ಡಿ.27ರಂದು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಅವರ ಅಳಿಯ ಅಕ್ಷತ್ ಕುಮಾರ್ ರೈ ಅವರು ಶುದ್ದ ಕಪಿಲೆ ಹಸುವನ್ನು ದತ್ತು ಸ್ವೀಕಾರ ಮಾಡಿದರು.

ಕಪಿಲೆ ಹಸುವಿನ ದತ್ತು ಸ್ವೀಕಾರಕ್ಕೆ ಸಂಬಂಧಿಸಿ ರೂ. 18ಸಾವಿರವನ್ನು ದೇವಳಕ್ಕೆ ಗೋಶಾಲೆಗೆ ಸಮರ್ಪಣೆ ಮಾಡುವುದಾಗಿ ಭರವಸೆ ನೀಡಿದ್ದು, ರೂ. 10,555 ಅನ್ನು ಪ್ರಥಮ ಕಂತಾಗಿ ನೀಡಿದರು.

LEAVE A REPLY

Please enter your comment!
Please enter your name here