ಕಕ್ಕೂರು ಅಂಗನವಾಡಿಗೆ ಜಾರುಬಂಡಿ, ಆಟದ ಕುದುರೆ ಕೊಡುಗೆ

0

ಬೆಟ್ಟಂಪಾಡಿ:  ಇಲ್ಲಿನ ಕಕ್ಕೂರು ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಪುಟಾಣಿ ಸಮಕ್ಷ್ ಪೂಜಾರಿ ಹಾಗೂ ಶ್ರೀಮತಿ ಶ್ವೇತಾ ರಾಕೇಶ್ ಬಜಾಲ್ ಮಂಗಳೂರು ಇವರು  ಜಾರುಬಂಡಿ ಹಾಗೂ ಆಟದ ಕುದುರೆಯನ್ನು ಕೊಡುಗೆಯಾಗಿ ನೀಡಿದರು. ಅಂಗನವಾಡಿ ಕೇಂದ್ರದಲ್ಲಿ  ಶ್ರೀಮತಿ ಶ್ವೇತಾ ರಾಕೇಶ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ರಾಧಾಕೃಷ್ಣ ಭಟ್ ಕಕ್ಕೂರು ಇವರ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಹರಿಣಾಕ್ಷಿ, ಬಾಲ ವಿಕಾಸ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಮಕ್ಕಳ ಹೆತ್ತವರು, ಮುದ್ದು ಪುಟಾಣಿಗಳು, ಕಾರ್ಯಕರ್ತೆ ಮತ್ತು ಸಹಾಯಕಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಎಂ. ನಿರ್ವಹಿಸಿದರು.

LEAVE A REPLY

Please enter your comment!
Please enter your name here