ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಹೊಸ ವರ್ಷಾಚರಣೆ

0

ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಹೊಸ ವರ್ಷವನ್ನು ವಿಶೇಷವಾಗಿ
ಆಚರಿಸಲಾಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಆರಂಭಿಸಲಾಯಿತು.  ಸಂಸ್ಥೆಯ ಮುಖ್ಯೋಪಾಧ್ಯಾಯನಿ  ಪ್ರಮೀಳಾ ಎನ್ ಡಿ  ಪ್ರಾಸ್ತಾವಿಕ ಮಾತನಾಡಿ ಹೊಸ ವರುಷವನ್ನು ಹೊಸ ಉಲ್ಲಾಸದಿಂದ ಆಚರಿಸಿ ಎಂದರು.

ನಿವೃತ್ತ ಶಿಕ್ಷಕರು, ಲೇಖಕರು, ಸಂಪಾದಕರು ಮಧು ಪ್ರಪಂಚದ ನಾರಾಯಣ ರೈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಸ್ಥಾಪಕಾಧ್ಯ  ಗೋಕುಲ್ ನಾಥ್ ಪಿವಿ,  ಹೊಸ ವರ್ಷವೂ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳಿಲ್ಲದೆ ಸುಸೂತ್ರವಾಗಿ ಸಾಗಲಿ ಎಂದು ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲೆ  ಹೇಮಲತಾ ಗೋಕುಲ್ ನಾಥ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ  ಮೇಘ ಗೋಕುಲ್ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹೊಸ ವರ್ಷವನ್ನು ವಿದ್ಯಾರ್ಥಿಗಳಿಗೆ ?ಸೀಕ್ರೆಟ್ ಸಾಂತ? ಎಂಬ  ಆಟದೊಂದಿಗೆ ಉಡುಗೊರೆಯನ್ನು ನೀಡುವ ಮೂಲಕ ಮುಕ್ತಾಯಗೊಳಿಸಲಾಯಿತು.

ಅಪೂರ್ವ ಪ್ರಾರ್ಥಿಸಿದರು, ಉಪನ್ಯಾಸಕಿ  ಶುಭಲಕ್ಷ್ಮಿ ಕಾರ್ಯಕ್ರಮವನ್ನು ನಿರ್ವಹಿಸಿ, ಉಪನ್ಯಾಸಕಿ  ಸ್ಪೂರ್ತಿ ಇವರು ಸ್ವಾಗತಿಸಿ,  ಉಪನ್ಯಾಸಕಿ  ಮೇಘಶ್ರೀ ಧನ್ಯವಾದಗೈದರು.

LEAVE A REPLY

Please enter your comment!
Please enter your name here