ವಿವೇಕ ರಥ ಯುವ ಪಥ-ಯುವ ಜಾಗೃತಿ ಜಾಥಾಕ್ಕೆ ಸಂಸದ ನಳಿನ್ ಕುಮಾರ್ ಅವರಿಂದ ಸ್ವಾಗತ

0

ಸವಣೂರು  : ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ ,ದ.ಕ.ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಜಿಲ್ಲಾ ಯುವಜನ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾದ್ಯಂತ  ಸಂಚರಿಸುವವಿವೇಕ ರಥ ಯುವ ಪಥ-ಯುವ ಜಾಗೃತಿ ಜಾಥಾಕ್ಕೆ ಪಾಲ್ತಾಡಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಕಡಬ ತಾಲೂಕಿಗೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎ.ವಿ.ತೀರ್ಥರಾಮ,ರೈಲ್ವೇ ಮಂಡಳಿ  ಸದಸ್ಯ ಜಗದೀಶ್ ಅಧಿಕಾರಿ,ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಎನ್.ಮನ್ಮಥ,ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ನಿರ್ದೇಶಕರಾದ ಇಂದಿರಾ ಬಿ.ಕೆ,ಗೌತಮ್ ಕರುಂಬಾರು,ಪ್ರವೀಣ್ ಚೆನ್ನಾವರ,ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಮಹೇಶ್ ಕೆ.ಸವಣೂರು,ತಾ.ಪಂ.ಮಾಜಿ ಸದಸ್ಯ ಮುಕುಂದ,ಶೈಲೇಶ್ ಅಂಬೆಕಲ್ಲು,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಹರೀಶ್ ರೈ ,ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ,ಕಾರ್ಯದರ್ಶಿ ಉದಯ ಬಿ.ಆರ್,ರಾಮಕೃಷ್ಣ ಪ್ರಭು,ಅಶ್ವಿನಿ ಟಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here