ಶಾಲೆಯಿಂದ ಬ್ಯಾಟರಿ ಕಳವು

0

ಉಪ್ಪಿನಂಗಡಿ: ಕರಾಯ ಸರಕಾರಿ ಪ್ರೌಢಶಾಲೆಯ ಬೀಗ ಮುರಿದು ಸುಮಾರು 30 ಸಾವಿರ ರೂ. ಬೆಲೆ ಬಾಳುವ ಬ್ಯಾಟರಿಯನ್ನು ಕಳವುಗೈದ ಘಟನೆ ನಡೆದಿದೆ.

ಸೋಮವಾರ ಶಾಲಾ ಕೊಠಡಿ ತೆರೆಯುವಾಗ ಕಳವು ಘಟನೆ ಬೆಳಕಿಗೆ ಬಂದಿದ್ದು, ಶಾಲಾ ಕಚೇರಿಯ ಪಕ್ಕದ ಕೊಠಡಿಯಲ್ಲಿನ ಕಂಪ್ಯೂಟರ್ ರೂಂನಲ್ಲಿ ಇರಿಸಲಾಗಿದ್ದ ಬ್ಯಾಟರಿಗಳು ಕಳವಾಗಿವೆ. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಬಸವ ಲಿಂಗಪ್ಪ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ಠಾಣಾ ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿಯೂ ಕೆಲವು ದಿನಗಳ ಹಿಂದೆ ಬ್ಯಾಟರಿಗಳನ್ನು ಕಳವುಗೈಯಲಾಗಿತ್ತು. ಬ್ಯಾಟರಿ ಕಳವು ನಡೆಸುವ ತಂಡವೊಂದು ಇಲ್ಲಿ ಸಕ್ರೀಯವಾಗಿರುವುದು ಕಂಡು ಬರುತ್ತಿದೆ.

LEAVE A REPLY

Please enter your comment!
Please enter your name here