ಟೈಲರ್ಸ್ ಸಂಸ್ಥಾಪಣಾ ದಿನಾಚರಣೆ : ಪ್ರಜ್ಞಾ ಆಶ್ರಮಕ್ಕೆ ಧನ ಸಹಾಯ, ಸನ್ಮಾನ ಕಾರ್ಯಕ್ರಮ

0

 

ಪುತ್ತೂರು:  ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಸನ್ ಕ್ಷೇತ್ರ ಸಮಿತಿ ಪುತ್ತೂರು ಇದರ ವತಿಯಿಂದ ಟೈಲರ್ಸ್ ಸಂಸ್ಥಾಪಣಾ ದಿನಾಚರಣೆˌಮಾನಸಿಕ ಭಿನ್ನ ಸಾಮರ್ಥ್ಯದ ತರಬೇತಿ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ ಪ್ರಜ್ಞಾ ಆಶ್ರಮಕ್ಕೆ ಸಹಾಯಧನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವು ಮಾ.7 ರಂದು ಪುತ್ತೂರು ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ನಡೆಯಿತು.


ˌಸಭೆಯು ಕ್ಷೇತ್ರ ಸಮಿತಿ ಅಧ್ಯಕ್ಷದ ಜಯರಾಮ ಬಿ ಎನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ˌಕಾರ್ಯಕ್ರಮದಲ್ಲಿ ತಾಲೂಕಿನ 9 ವಲಯಗಳಿಂದ ಸಂಗ್ರಹಿಸಲ್ಪಟ್ಟ 19730 ರೂಪಾಯಿಯ ಚೆಕ್ ನ್ನು ಪ್ರಜ್ಞಾ ಕೇಂದ್ರವನ್ನು ನಡೆಸಿಕೊಂಡು ಬರುತ್ತಿರುವ ತಿ ಜ್ಯೋತಿ ಎಂ ಮತ್ತು ಅಣ್ಣಪ್ಪ ವಿ ದಂಪತಿಗಳಲ್ಲಿ ಪ್ರಜ್ಞಾಶ್ರಮಕ್ಕೆ ಹಸ್ತಾಂತರಿಸಲಾಯಿತು. ನಂತರ ದಂಪತಿಗಳನ್ನು ಕ್ಷೇತ್ರ ಸಮಿತಿ ಪುತ್ತೂರು ಇದರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ˌವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಉಮಾ ಯು ನ್ಯಾಕ್ˌ, ಕೋಶಾಧಿಕಾರಿ ಸುಜಾತ ˌಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಚಿತ್ರಾ ಬಿ ಸಿˌಉಪಸ್ಥಿತರಿದ್ದರು. ˌಕಾರ್ಯಕ್ರಮವು ಬಿ ಸಿ ಚಿತ್ರಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ˌಈ ಸಂದರ್ಭದಲ್ಲಿ ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿದ್ದ ಉದಯ ಕೋಲಾಡಿ,ˌಸುಜಾತ ಕ್ರಷ್ಣ, ಯಶೋಧರ ಜೈನ್,ˌಸುಲೋಚನರವರು ಮಾತನಾಡಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ˌಸಭೆಯಲ್ಲಿ ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ರೋಹಿತಾಕ್ಷ, ಕಾರ್ಯದರ್ಶಿ ಸುಜಾತ ಕ್ರಷ್ಣˌ, ಮಾರ್ಕೊ ಟೈಲರ್ˌನಗರ ವಲಯ ಸಮಿತಿಯ ಅಧ್ಯಕ್ಷ ಯಶೋಧರ ಜೈನ್ˌ, ಕಾರ್ಯದರ್ಶಿ ಭಾರತಿ, ಸದಸ್ಯರಾದ ಉಷಾ ನಂದಿಲ, ˌಸ್ವಾತಿˌಅಶೋಕ ಮುರ,ˌಸುಲೋಚನˌದಿನೇಶ್ ಸಂಪ್ಯˌ,ಧರ್ಮಾವತಿ, ˌಈಶ್ವರಮಂಗಲ ವಲಯ ಸಮಿತಿ ಅಧ್ಯಕ್ಷ ರೇವತಿ.ˌಕಾರ್ಯದರ್ಶಿ ಗಣೇಶ್, ˌಜಿಲ್ಲಾ ಸಮಿತಿ ಸಂಘಟಣಾ ಕಾರ್ಯದರ್ಶಿ ಶಂಭು ಬಲ್ಯಾಯˌಕೋಲಾಡಿ ಬಟನ್ಸ್ ನ ಉದಯ ಕೋಲಾಡಿ ಉಪಸ್ಥಿತರಿದ್ದರು. ˌಶಂಭು ಬಲ್ಯಾಯ ಸ್ವಾಗತಿಸಿ ˌಕಾರ್ಯಕ್ರಮ ನಿರೂಪಿಸಿದರು. ˌಕಾರ್ಯದರ್ಶಿ ಉಮಾ ಯು ನ್ಯಾಕ್ ವಂದಿಸಿದರು. ˌರಾಷ್ಟೃ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.ˌಪ್ರಜ್ಞಾ ಕೆಂದ್ರದ ಎಲ್ಲಾ ಸದಸ್ಯರು ಕಾರ್ಯಕ್ರಮದ ಆರಂಭದಿಂದ ಕೊನೆಯವರೆಗೂ ಶಿಸ್ತಿನಿಂದ ಪಾಲ್ಗೊಂಡಿದ್ದರುˌಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತುˌ

LEAVE A REPLY

Please enter your comment!
Please enter your name here