ಕಂದಾಯ ದಾಖಲೆ ಮನೆ ಬಾಗಿಲಿಗೆ : ಪಾಲ್ತಾಡಿಯಲ್ಲಿ  ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ಚಾಲನೆ

0

ಸವಣೂರು : ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್‌, ಹಿಸ್ಸಾ ಸ್ಕೆಚ್‌, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಎಂಬ ಯೋಜನೆಯ ಅಂಗವಾಗಿ ಪಾಲ್ತಾಡಿ ಗ್ರಾಮದಲ್ಲಿ  ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ,ಭರತ್ ರೈ ,ವಿನೋದಾ ರೈ,ಹರಿಕಲಾ ರೈ ಕುಂಜಾಡಿ, ತಾರಾನಾಥ ಬೊಳಿಯಾಲ,ಚೇತನಾ ಶಿವಾನಂದ ಪಾಲ್ತಾಡಿ,ಹರೀಶ್ ಕಾಯರಗುರಿ,ಮಾಜಿ ಉಪಾಧ್ಯಕ್ಷ ಕಿಟ್ಟಣ್ಣ ರೈ ಪಾಲ್ತಾಡಿ, ಮಾಜಿ ಸದಸ್ಯ ದಿವಾಕರ ಬಂಗೇರ,ಸುಬ್ಬಣ್ಣ ದಾಸ್,ಬೆಳ್ಳಾರೆ ಸಿಎ ಬ್ಯಾಂಕ್‌ನ ಸಿಇಓ ವಿಜಯ ರೈ ನೆಲ್ಯಾಜೆ,  ಸುಬ್ರಾಯ ಗೌಡ,ಪ್ರಸಾದ್ ರೈ ಬೈಲಾಡಿ,ಶ್ರೀಧರ ಗೌಡ,ಸುಲೈಮಾನ್,ಹೊನ್ನಪ್ಪ ಗೌಡ,ಪುಟ್ಟಣ್ಣ ಸಿ.ಎಂ ಮೊದಲಾದವರಿದ್ದರು. ಗ್ರಾಮಕರಣಿಕರಾದ ರವಿಚಂದ್ರ ಸ್ವಾಗತಿಸಿ,ಗ್ರಾಮ ಸಹಾಯಕ ಬಾಬು ಬಿ. ವಂದಿಸಿದರು.

LEAVE A REPLY

Please enter your comment!
Please enter your name here