ದೈಪಿಲ ಕ್ಷೇತ್ರದ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಕಾಣಿಯೂರು: ಶ್ರೀ ಕ್ಷೇತ್ರ ದೈಪಿಲ ಗ್ರಾಮ ದೈವ ಶಿರಾಡಿ ರಾಜನ್ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಫೆ 7, 8ರಂದು ನಡೆಯಲಿದ್ದು, ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ.1ರಂದು ಜರಗಿತು. ಪ್ರಾರಂಭದಲ್ಲಿ ಅರುವಗುತ್ತಿನಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಅಂಬುಲದಲ್ಲಿ ಗೊನೆ ಮುಹೂರ್ತ ನೆರವೇರಿಸಲಾಯಿತು.‌

ಈ ಸಂದರ್ಭದಲ್ಲಿ ಚಂದ್ರಕಲಾ ಜಯರಾಮ್ ಗೌಡ ಅರುವಗುತ್ತು, ಅರುವಗುತ್ತಿನ ಯಜಮಾನರಾದ ಪ್ರದೀಪ್ ಆರ್.ಗೌಡ, ವಚನ ಪ್ರದೀಪ್ ಮತ್ತು ದೈವದ ಪ್ರಧಾನ ಪರಿಚಾರಕ ಧರ್ಮಪಾಲ ಗೌಡ ಅಂಬುಲ ಮತ್ತು ನಾಲ್ಕು ಮನೆಯವರು, 13 ವರ್ಗದವರು ಹಾಗೂ ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here