ರೆಂಜ: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ – ಗೌರವಾಧ್ಯಕ್ಷ : ಕರುಣಾಕರ ಶೆಟ್ಟಿ, ಸಂಚಾಲಕ: ಕೃಷ್ಣಪ್ಪ ಗೌಡ, ಅಧ್ಯಕ್ಷ: ಜಯರಾಮ ರೈ, ಪ್ರ.ಕಾರ್ಯದರ್ಶಿ: ನಾಗರಾಜ್ ಕಜೆ

0

ಬೆಟ್ಟಂಪಾಡಿ: ಇಲ್ಲಿನ‌ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ ಜ. 29 ರಂದು ನಡೆಯಿತು.‌

ಇದೇ ವೇಳೆ ಬೆಳ್ಳಿಹಬ್ಬ ಸಮಿತಿಯ ಸಭೆಯು ನಡೆದು ಜಮಾಖರ್ಚಿನ ಲೆಕ್ಕಾಚಾರ ಮಂಡಿಸಲಾಯಿತು. 

ಭಜನಾ ಮಂದಿರದ‌ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಕರುಣಾಕರ ಶೆಟ್ಟಿ ಕೊಮ್ಮಂಡ, ಸಂಚಾಲಕರಾಗಿ ಕೃಷ್ಣಪ್ಪ ಗೌಡ ಗುರುಸ್ವಾಮಿ ಯವರನ್ನು ಪುನರಾಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಜಯರಾಮ ರೈ ಮೂರ್ಕಾಜೆ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ್ ಕಜೆ, ಕೋಶಾಧಿಕಾರಿಯಾಗಿ ಚೇತನ್ ರೆಂಜ, ಉಪಾಧ್ಯಕ್ಷರಾಗಿ ಪ್ರಕಾಶ್ ರೈ ಬೈಲಾಡಿ, ರವಿನಾಥ ಕೋನಡ್ಕ, ಸತೀಶ್ ಗೌಡ ಪಾರಪೊಯ್ಯೆ, ದುಗ್ಗಪ್ಪ ನಾಯ್ಕ ಕಜೆ, ರಮೇಶ್ ಕುಕ್ಕುಪುಣಿ, ಜತೆ ಕಾರ್ಯದರ್ಶಿಗಳಾಗಿ ತುಷಾರ್‌ ಕಜೆ ಮತ್ತು ಅಂಕಿತ್ ಕೋನಡ್ಕರವರನ್ನು ಆಯ್ಕೆ ಮಾಡಲಾಯಿತು.

ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷ ಶಂಕರನಾರಾಯಣ ರಾವ್, ಅಧ್ಯಕ್ಷ‌ ಪ್ರಕಾಶ್ ರೈ ಬೈಲಾಡಿ, ಪ್ರ.ಕಾರ್ಯದರ್ಶಿ ರಾಜೇಶ್ ನೆಲ್ಲಿತ್ತಡ್ಕ, ಕೋಶಾಧಿಕಾರಿ ಶಿವಪ್ರಸಾದ್ ತಲೆಪ್ಪಾಡಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ, ಟ್ರಸ್ಟಿ ಶೇಷಪ್ಪ ರೈ ಮೂರ್ಕಾಜೆ, ದುಗ್ಗಪ್ಪ ನಾಯ್ಕ್ ಕಜೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here