ಕಾಂಚನ ನಡ್ಪ ದೇವಸ್ಥಾನದ ವರ್ಷಾವಧಿ ಜಾತ್ರೆ-ಹೊರೆಕಾಣಿಕೆ ಸಮರ್ಪಣೆ

0

ನೆಲ್ಯಾಡಿ: ಫೆ.13 ಹಾಗೂ 14 ರಂದು ನಡೆಯುವ ಕಾಂಚನ-ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ ಪ್ರಯುಕ್ತ ಫೆ.12ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.


ಬೆಳಿಗ್ಗೆ ಕಾಂಚನ ಬಸ್‌ನಿಲ್ದಾಣದಿಂದ ಹೊರೆಕಾಣಿಕೆ ಮೆರವಣಿಗೆ ಆರಂಭಗೊಂಡಿತು. ಗ್ರಾಮಸ್ಥರು ಅಡಿಕೆ,ತೆಂಗು,ಬಾಳೆಗೊನೆ, ಸಿಯಾಳ ಸೇರಿದಂತೆ ವಿವಿಧ ಫಲವಸ್ತು, ಕಾಣಿಕೆ ಡಬ್ಬಿ, ಬಲಿವಾಡ ಸಹಿತ ಹೊರೆಕಾಣಿಕೆ ಸಮರ್ಪಣೆ ಮಾಡಿದರು. ಬಳಿಕ ದೇವಸ್ಥಾನದಲ್ಲಿ ಉಗ್ರಾಣ ಮುಹೂರ್ತ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಅರ್ಚಕರು, ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ, ದೇವಸ್ಥಾನದ ಟ್ರಸ್ಟ್‌ನ ಗೌರವಾಧ್ಯಕ್ಷರಾದ ಎ.ಸುಂದರ ಗೌಡ ಸಚಿನ್, ಅಧ್ಯಕ್ಷ ಶ್ರೀಧರ ಗೌಡ ಶ್ರೀಹರಿ ನಡ್ಪ, ಉಪಾಧ್ಯಕ್ಷ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಲೋಕೇಶ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲ್ಲಾಯ, ಉಪಟ್ರಸ್ಟಿಗಳಾದ ಸುರೇಶ್ ಬಿದಿರಾಡಿ, ಪ್ರಸನ್ನ ಕಾರಂತ್, ಯಾದವ ಗೌಡ, ನೋಣಯ್ಯ ಗೌಡ, ಎಲ್ಯಣ್ಣ ಗೌಡ, ದಿನೇಶ್ ನಡ್ಪ, ಶಿವರಾಮ ಪ್ರಸಾದ್ ಬಜತ್ತೂರು, ಕಿಶೋರ್ ಬಜತ್ತೂರು ಸೇರಿದಂತೆ ಶ್ರೀ ವಿಷ್ಣುಮೂರ್ತಿ ಶಾಶ್ವತ ಮಹಾಸಮಿತಿ, ಶ್ರೀ ವಿಷ್ಣುಮೂರ್ತಿ ಶಾಶ್ವತ ಉಪಸಮಿತಿ, ಶ್ರೀ ವಿಷ್ಣುಮೂರ್ತಿ ಭಜನಾ ಸಂಘ, ಧನುಪೂಜಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರಿನ ಭಗವದ್ಭಕ್ತರು, ಗುತ್ತು ಬಾರಿಕೆಯವರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here