ತಲೆಪ್ಪಾಡಿ ಮಹಾಲಿಂಗ ಮಣಿಯಾಣಿ ನಿಧನ

0

ಬೆಟ್ಟಂಪಾಡಿ: ಇಲ್ಲಿನ ತಲೆಪ್ಪಾಡಿ ಮಹಾಲಿಂಗ ಮಣಿಯಾಣಿ (95ವ.) ವಯೋಸಹಜವಾಗಿ ಮಾ. 11 ರಂದು ನಿಧನರಾದರು.


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸಕ್ರೀಯ ಸದಸ್ಯರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಯಾದವಾ ಸಭಾ ನಿಡ್ಪಳ್ಳಿ ಬೆಟ್ಟಂಪಾಡಿ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿಯಾಗಿ, ಮಿತ್ತಡ್ಕ ಶಾಲಾಭಿವೃದ್ಧಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.


ಮೃತರು ಪುತ್ರರಾದ ಕುಂಞಿಕೃಷ್ಣ ಮಣಿಯಾಣಿ, ಲಕ್ಷ್ಮಣ ಮಣಿಯಾಣಿ, ಪುತ್ರಿ ರತ್ನಾವತಿ, ಸಹೋದರಿ ಮುತ್ತಕ್ಕ ಕಿನ್ನಿಂಗಾರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು,‌ ಮರಿಮಕ್ಕಳನ್ನು ಅಗಲಿದ್ದಾರೆ.


ಮೃತರ ಮನೆಗೆ ಶಾಸಕ ಸಂಜೀವ ಮಠಂದೂರು, ಪಂಚಾಯತ್ ಉಪಾಧ್ಯಕ್ಷ ವಿನೋದ್ ರೈ ಗುತ್ತು, ಸದಸ್ಯರಾದ ಪ್ರಕಾಶ್ ರೈ, ಪಾರ್ವತಿ ಗೌಡ, ಗಂಗಾಧರ ಎಂ.ಎಸ್., ಮಹೇಶ್ ಕೋರ್ಮಂಡ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ಅಪ್ಪಯ್ಯ ಮಣಿಯಾಣಿ ಪುತ್ತೂರು, ಅಮೃತಪ್ರಸಾದ್ ರೈ ಗುತ್ತು ಸೇರಿದಂತೆ ಊರಿನ ಪ್ರಮುಖರು, ಬಂಧು ಮಿತ್ರರು, ಕುಟುಂಬಿಕರು ಪಾಲ್ಗೊಂಡು ಮೃತರ ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here