ಬ್ರಹ್ಮಕಲಶಾಭಿಷೇಕ ಮಾಡಿಸಿಕೊಂಡ ಮಹಿಷಮರ್ದಿನಿಗೆ ಮೊದಲ‌ ವೃಷ್ಟಿ ಅಭಿಷೇಕ

0

ಪುಣಚ: ನಿನ್ನೆಯಷ್ಟೇ ಋತ್ವಿಜರಿಂದ ಬ್ರಹ್ಮಕಲಶಾಭಿಷೇಕವಾದ ಪುಣಚದ ಶ್ರೀ ಮಹಿಷಮರ್ದಿನಿ ತಾಯಿ ಇಂದು ತನಗೆ ತಾನೇ ವರ್ಷ ಅಭಿಷೇಕ ಮಾಡಿಸಿಕೊಂಡಿದ್ದಾಳೆ. ಹೌದು.. ಮಾ. 14 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೊದಲ‌ ಮಳೆಯ ಸಿಂಚನವಾಗಿತ್ತು.

ಇಂದು ಮಾ. 15 ರಂದು ಪುತ್ತೂರು ಭಾಗದಲ್ಲಿ ಸಣ್ಣಗಿನ ಗುಡುಗು, ಮೋಡ ಕವಿದಿದ್ದರೂ ಮಳೆಯ ಸಿಂಚನವಾಗಿರುವುದು ಪುಣಚ ದೇವಿ ಸಾನ್ನಿಧ್ಯದ ಆಸುಪಾಸಿನಲ್ಲಿ.

ಬ್ರಹ್ಮಕಲಶಾಭಿಷೇಕ ಮಾಡಿಸಿಕೊಂಡಿರುವ ದೇವಿ ಇಂದು ಸರ್ವ ಸಂತೃಪ್ತೆ ಎನ್ನುವಂತೆ ವೃಷ್ಟಿಧಾರೆ ಹರಿಸಿಕೊಂಡು ಗಂಗಾಭಿಷೇಕ ಮಾಡಿಸಿಕೊಂಡಿದ್ದಾಳೆ ಎಂಬ ಮಾತುಗಳು ಭಕ್ತ ವಲಯದಲ್ಲಿ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here