ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರಮದಾನ

0

ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ ಶ್ರಮದಾನ ನಡೆಯಿತು.

ಎ.೨ ಮತ್ತು ೩ರಂದು ನಡೆಯುವ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ದೇವಾಲಯದ ಸುತ್ತಮುತ್ತಲ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ವಿಕ್ರಂ ಯುವಕ ಮಂಡಲದ ಸದಸ್ಯರಾದ ಶಿವಪ್ರಸಾದ್ ಕೈಂದಾಡಿ, ಪ್ರಭಾತ್ ಸಾರಕರೆ, ವರುಣ್ ಶಾಂತಿಗೋಡು, ಪ್ರವೀಣ್ ಬೊಳ್ಳೆಕ್ಕು, ಕಾರ್ತಿಕ್ ಕುಕ್ಯಾನ, ಶಶಿಕುಮಾರ್ ಓಲಾಡಿ, ಭಾಸ್ಕರ ಓಲಾಡಿ, ವಿನೋದ್ ಓಲಾಡಿ, ಹರ್ಷಿತ್ ಬಂಡಶಾಲೆ, ಜತ್ತಪ್ಪ ಕೈಂದಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here