ನರಿಮೊಗರು ಎಲಿಕದಲ್ಲಿ ಗೃಹಪ್ರವೇಶ, ಚಂಡಿಕಾಹವನ, ಕಲ್ಲುರ್ಟಿ ದೈವದ ನರ್ತನ ಸೇವೆ

0

ಪುತ್ತೂರು: ನರಿಮೊಗರು ಗ್ರಾಮದ ಎಲಿಕಾದಲ್ಲಿ ದೇವಾನಂದ ಭಟ್‌ರವರು ನೂತನವಾಗಿ ನಿರ್ಮಿಸಿರುವ ಮನೆ ‘ಶ್ರೀವರಮಹಾಲಕ್ಷ್ಮೀ ಸದನ’ದ ಗೃಹಪ್ರವೇಶ ಹಾಗೂ ಶ್ರೀಚಂಡಿಕಾ ಹವನ ಮೇ 12ರಂದು ನಡೆಯಿತು. ಮಧ್ಯಾಹ್ನ ಪೂರ್ಣಾಹುತಿ, ಕುಮಾರಿ ಪೂಜೆ, ಸುಹಾಸಿನಿ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಮೇ 13ರಂದು ಸಂಜೆ ಮಜಲುಮಾರು ಉಮಾಮಹೇಶ್ವರ ಭಜನಾ ಮಂಡಳಿ, ಉಜಿರೆ ಹಳೆಪೇಟೆ ವಿವೇಕಾನಂದ ನಗರ ಸರಸ್ವತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ಬಳಿಕ ಕಲ್ಲುರ್ಟಿ ದೈವದ ನರ್ತನ ಸೇವೆ ನಡೆಯಿತು. ಮೇ.15ರಂದು ಸಂಕ್ರಮಣದ ಪ್ರಯುಕ್ತ ಮಧ್ಯಾಹ್ನ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು.

LEAVE A REPLY

Please enter your comment!
Please enter your name here