ಮಂಗಳೂರಿನಿಂದ ದುಬೈಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ-ತಪ್ಪಿದ ದುರಂತ

0

ಪುತ್ತೂರು: ಟೇಕಾಫ್ ಗೆ ರೆಡಿಯಾಗಿದ್ದ ವಿಮಾನದ ರೆಕ್ಕೆಗೆ ಹಕ್ಕಿ ಬಡಿದ ಪರಿಣಾಮ ಟೇಕಾಫ್‌ ಕ್ಯಾನ್ಸಲ್‌ ಆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.‌

ಇಂದು ಬೆಳಿಗ್ಗೆ 8:30 ಕ್ಕೆ ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟ್ಯಾಕ್ಸಿ ವೇ ದಾಟಿ ಟೇಕಾಫ್‌ಗಾಗಿ ರನ್‌ವೇಯಲ್ಲಿ ಸಾಗಿತ್ತಿದ್ದ ವೇಳೆ ರೆಕ್ಕೆಗೆ ಹಕ್ಕಿಯೊಂದು ಬಡಿದಿದೆ. ಅಪಾಯದ ಸೂಚನೆಯರಿತ ಪೈಲಟ್‌ ಎಟಿಸಿಗೆ ಮಾಹಿತಿ ನೀಡಿ, ಟೇಕಾಫ್‌ ಕ್ಯಾನ್ಸಲ್‌ ಮಾಡಿ ವಿಮಾನವನ್ನು ರನ್‌ವೇಯಿಂದ ವಾಪಸ್‌ ತರಲಾಯಿತು. ಬೆಂಗಳೂರಿನಿಂದ ಆಗಮಿಸಿದ ಸಂಸ್ಥೆಯ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈಗೆ ಕಳುಹಿಸಲಾಯಿತು.

LEAVE A REPLY

Please enter your comment!
Please enter your name here