ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿಯಿಂದ ಸಿಇಟಿ/ನೀಟ್ ಮಾರ್ಗದರ್ಶಿ ಕಾರ್ಯಾಗಾರ ಉದ್ಘಾಟನೆ

0

ಪುತ್ತೂರು: ಎಪಿಎಂಸಿ ರೋಡ್ ಸಮೀಪದ ಬರೆಕೆರೆ ವೆಂಕಟ್ರಮಣ ಹಾಲ್‌ನಲ್ಲಿರುವ ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿ ವತಿಯಿಂದ ಒಂದು ದಿನದ ಉಚಿತ ಸಿಇಟಿ/ನೀಟ್ ಮಾರ್ಗದರ್ಶಿ ಕಾರ್ಯಾಗಾರ ಜೂ.4ರಂದು ಬೆಳಿಗ್ಗೆ ಜರುಗಿತು.

ಕಾರ್ಯಕ್ರಮವನ್ನು ಸತ್ಯಸಾಯಿ ಲೋಕಸೇವಾ ಪ.ಪೂ. ಕಾಲೇಜಿನ ಉಪನ್ಯಾಸಕ ಪ್ರಮೋದ್ ಎಚ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಏಕಾಗ್ರತೆ ಮತ್ತು ಛಲದಿಂದ ಯಶಸ್ಸು ಸಾಧಿಸಬಹುದು ಎಂದು ಹೇಳಿ ಶುಭಹಾರೈಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ವಿಘ್ನೇಶ್ ಎಚ್. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶೈಕ್ಷಣಿಕ ನಿರ್ದೇಶಕ ಶರತ್ ಎನ್.ಕೆ. ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾರ್ಥಿ ಕಾಶ್ಯಪ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ, ಅಭ್ಯಾಸ ವಿಧಾನಗಳು ಮತ್ತು ಇತರೆ ಅಂಶಗಳ ಉಪನ್ಯಾಸ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅರ್ಹತೆ, ಮಾನದಂಡಗಳು, ಮೀಸಲಾತಿ, ಅಗತ್ಯ ದಾಖಲೆಗಳು, ಕೌನ್ಸೆಲಿಂಗ್ ಮತ್ತು ಪರಿಶೀಲನೆಗಳ ಕುರಿತಾದ ಹೆಚ್ಚುವರಿ ಮಾಹಿತಿಯನ್ನೊಳಗೊಂಡ ಕಾರ್ಯಗಾರ ನಡೆಯಿತು.

LEAVE A REPLY

Please enter your comment!
Please enter your name here