ಸೂರಿಕುಮೇರು ಚರಂಡಿಗೆ ಬಿದ್ದ ಕಾರು- ಮೇಲೆತ್ತಲು ಸಹಾಯ ಮಾಡಿದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಚರಂಡಿಗೆ ಕಾರೊಂದು ಬಿದ್ದಿದ್ದು, ಅದನ್ನು ಮೇಲೆತ್ತಲು ಅರುಣ್ ಕುಮಾರ್ ಪುತ್ತಿಲ ಸಹಾಯ ಮಾಡಿದ್ದಾರೆ.

ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುವ ವೇಳೆ ರಾತ್ರಿ ಸುಮಾರು 10.45 ಸಮಯದಲ್ಲಿ ಕಾರೊಂದು ಸೂರಿಕುಮೇರು ಬಳಿ ಚರಂಡಿಗೆ ಬಿದ್ದಿದ್ದನ್ನು ಗಮನಿಸಿದ ಅರುಣ್ ಕುಮಾರ್ ಪುತ್ತಿಲರು ತಕ್ಷಣ ತನ್ನ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಆಪ್ತರೊಂದಿಗೆ ಸೇರಿ ಕಾರನ್ನು ಮೇಲೆತ್ತಲು ಸಹಾಯ ಮಾಡಿದರು.

ಜಾತಿ, ಧರ್ಮ,ಪಕ್ಷ ನೋಡದೇ ಸಂಕಷ್ಟದಲ್ಲಿದ್ದವರ ಕಾರನ್ನು ಮೇಲೆತ್ತಲು ಸಹಾಯ ಮಾಡಿದ ಅರುಣ್ ಕುಮಾರ್ ಪುತ್ತಿಲರ ಈ ನಡೆ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here