ಸ್ಯಾಕ್ಸೋಫೋನ್ ವಾದಕ ಮೂಡಾಯೂರು ಶ್ರೀಧರ ದೇವಾಡಿಗ ನಿಧನ

0

ಪುತ್ತೂರು: ಚಿಕ್ಕಮುಡ್ನುರು ಗ್ರಾಮದ ದಿ.ಚಂದ್ರಾವತಿ ಹಾಗೂ ದಿ.ಬಾಬು ಸೇರಿಗಾರರವರ ಪುತ್ರ ಸ್ಯಾಕ್ಸೋಫೋನ್ ಕಲಾವಿದ ಮೂಡಾಯೂರು ಶ್ರೀಧರ ದೇವಾಡಿಗ (64ವ) ರವರು ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಜೂ.30ರಂದು ನಿಧನರಾದರು. ಇವರು 50 ವರ್ಷಗಳಿಂದ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಮಾಡಿಕೊಂಡು ಬಂದಿದ್ದರು. ಮೃತರು ಪತ್ನಿ ವಾರಿಜಾ, ಪುತ್ರರಾದ ಮನೋಜ್ ದೇವಾಡಿಗ ಮೂಡಾಯೂರು, ಮನೋಹರ ದೇವಾಡಿಗ ಮೂಡಾಯೂರು, ಪುತ್ರಿ ಪ್ರತಿಭಾ, ಅಳಿಯ ಸಂದೀಪ್ ದೇವಾಡಿಗ ಅರಿಯಡ್ಕ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಯಾಕ್ಸೋಫೋನ್ ವಾದಕ ಪಿ.ಕೆ ಗಣೇಶ್ ನೆಲ್ಲಿಕಟ್ಟೆ, ಮೊದಲಾದ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here