ಸುದಾನ ಶಾಲೆಯಲ್ಲಿ ಎಮ್‌.ಆರ್‌.ಪಿ.ಎಲ್ ನಿಂದ ಯುವ ಪ್ರೇರಣಾ ಕಾರ್ಯಕ್ರಮ

0

ಪುತ್ತೂರು: ಬುದ್ಧಿವಂತಿಕೆ ಮತ್ತು ಪರಿಶ್ರಮವಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಅಭ್ಯಾಸವನ್ನು ಮಾಡಿದರೆ ಭವಿಷ್ಯವು ಸುಖಮಯವಾಗಿರುತ್ತದೆ ಎಂದು ಪ್ರೋ. ಬಿ.ವಿ. ಸೂರ್ಯನಾರಾಯಣ ಅಭಿಪ್ರಾಯಪಟ್ಟರು . ಇವರು ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆದ ಎಮ್‌ ಆರ್‌ ಪಿ ಎಲ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಯುವ ಪ್ರೇರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯಶಿಕ್ಷಕಿ ಶೋಭಾನಾಗರಾಜ್ ಬದುಕಿನ ಗುರಿಯನ್ನು ಕಂಡುಕೊಂಡು ದೃಢಚಿತ್ತದಿಂದ ಮುನ್ನಡೆಯಿರಿ ಎಂದರು. ಇಂಟರ್‍ಯಾಕ್ಟ್ ಕ್ಲಬ್ ನ ವಿದ್ಯಾರ್ಥಿ ಪ್ರತಿನಿಧಿ ಇಶಿತಾ ಎಸ್ ನಾಯರ್ (10ನೇ), ಕಾರ್ಯದರ್ಶಿ ನಿಕೋಲಸ್ ರೋನಿನ್ ಮಥಾಯಿಸ್ (9ನೇ), ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಸಹಶಿಕ್ಷಕಿ ವಿನಯಾ ರೈ ಕಾರ್ಯಕ್ರಮವನ್ನು ನಿರೂಪಿಸಿ, ಸುದಾನ ಶಾಲೆಯ ಇಂಟರ್‍ಯಾಕ್ಟ್ ಕ್ಲಬ್ ‘ಸ್ಪಂದನಾ’ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here