ಕುಂತೂರು: ಗಾಂಜಾ ಸೇವನೆ ಇಬ್ಬರು ಯುವಕರ ಬಂಧನ

0

ಕಡಬ: ಗಾಂಜಾ ಸೇವಿಸಿದ ಇಬ್ಬರು ಯುವಕರನ್ನು ಕಡಬ ಪೋಲಿಸರು ಬಂಧಿಸಿದ ಘಟನೆ ಆ.2ರಂದು ನಡೆದಿದೆ.
ಬೇಲ್ಪಾಡಿ ನಿವಾಸಿ ಆದಂ ಎಂಬವರ ಮಗ ಜುನೈದ್ ಹಾಗೂ ಕೋಚಕಟ್ಟೆ ನಿವಾಸಿ ಮಹಮ್ಮದಾಲಿ ಎಂಬವರ ಮಗ ಮಹಮ್ಮದ್ ಇಕ್ಬಾಲ್ ಬಂಧಿತ ಯುವಕರು.

ಕುಂತೂರು-ಪೆರಾಬೆ ಬಸ್ಸು ನಿಲ್ದಾಣದ ಬಳಿ ಹೆದ್ದಾರಿಯ ಬದಿಯಲ್ಲಿ ಯುವಕರಿಬ್ಬರು ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ತೂರಾಡುತ್ತಿದ್ದು ನಂತರ ಅನುಮಾನಗೊಂಡು ವಶಕ್ಕೆ ಪಡೆದು ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವಸೆ ದೃಢಪಟ್ಟಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಅ.ಕ್ರ 68/2023 ಕಲಂ:27(ಬಿ)NDPS ACT-1985. ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here