ಗೋಳಿತ್ತೊಟ್ಟು: ಗ್ರಂಥಾಲಯ ದಿನಾಚರಣೆ ಸ್ಪರ್ಧೆ-ಶಾಂತಿನಗರ ಶಾಲೆಗೆ 6 ಪ್ರಶಸ್ತಿ

0

ನೆಲ್ಯಾಡಿ: ಗ್ರಂಥಾಲಯ ದಿನಾಚರಣೆ ಪ್ರಯುಕ್ತ ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ನಡೆದ ಭಾಷಣ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಗೋಳಿತ್ತಟ್ಟು ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಗೆ 6 ಬಹುಮಾನಗಳು ಲಭಿಸಿದೆ.


ಶಾಲೆಯ ವಿದ್ಯಾರ್ಥಿಗಳಾದ ಧೃತಿ-ಪ್ರಬಂಧದಲ್ಲಿ ಪ್ರಥಮ, ಗ್ರೀಷ್ಮಾ-ಚಿತ್ರಕಲೆಯಲ್ಲಿ ಪ್ರಥಮ, ಚೈತ್ರಾ-ಭಾಷಣದಲ್ಲಿ ದ್ವಿತೀಯ, ಕೀರ್ತಿರಾಜ್-ಚಿತ್ರಕಲೆಯಲ್ಲಿ ದ್ವಿತೀಯ, ಪ್ರಾಪ್ತಿ-ಪ್ರಬಂಧದಲ್ಲಿ ತೃತೀಯ ಹಾಗೂ ನಿಧಿ-ಭಾಷಣದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ, ಸಹಶಿಕ್ಷಕರಾದ ಮಂಜುನಾಥ ಮಣಕವಾಡ, ಪ್ರಮೀಳಾ, ತಾರಾ ಹಾಗೂ ವೀಕ್ಷಿತಾ ಅವರು ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here