ದೋಳ್ಪಾಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಕಾಣಿಯೂರು: ಸ.ಹಿ.ಪ್ರಾ.ಶಾಲೆ ದೋಳ್ಪಾಡಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಸಂಜೀವ ರೈ ಪೈಕ ಧ್ವಜಾರೋಹಣಗೈದರು.
ಎಸ್. ಡಿ. ಎಂ. ಸಿ ಅಧ್ಯಕ್ಷರಾದ ದಯಾನಂದ ಕೂರೇಲು, ಉಪಾಧ್ಯಕ್ಷರಾದ ನವೀನಾ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕಯ್ಯ ಪರವ, ದೇವಿಪ್ರಸಾದ್ ದೋಲ್ಪಾಡಿ ಉಪಸ್ಥಿತರಿದ್ದರು.


ದಾನಿಗಳಿದ ಧರ್ಮಪಾಲ ರೈ ಪಿಜಕ್ಕಳ, ಲಿಂಗಪ್ಪ ಗೌಡ ಅರಿಗೇಣಿ, ಉಮೇಶ್ ಆಚಾರ್ಯ, ಮಹಾಬಲೇಶ್ವರ ದೋಲ್ಪಾಡಿ, ವೆಂಕಟ್ರಮಣ ಎಂ.ವಿ. ಬಹುಮಾನ ವಿತರಿಸಿದರು.
ನಿವೃತ್ತ ಶಿಕ್ಷಕರಾದ ಸಂಜೀವ ರೈ ಪೈಕ ಮತ್ತು ಅಚ್ಯುತ ಗೌಡ ಕೂರೇಲು ಇವರನ್ನು ಸನ್ಮಾನಿಸಿದರು. ಮೋಹನ್ ದಾಸ್ ರೈ ಬಲ್ಕಾಡಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಆನಂದ ಗೌಡ ಬನೇರಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೋಳ್ಪಾಡಿ ಒಕ್ಕೂಟದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೂರೇಲು ಭಾಗವಹಿಸಿದರು. ಮುಖ್ಯ ಶಿಕ್ಷಕರಾದ ಜಯಣ್ಣ.ಎಸ್ ಸ್ವಾಗತಿಸಿದರು. ಶಿಕ್ಷಕಿ ಚಂಚಲಾಕ್ಷಿ ಕಾರ್ಯಕ್ರಮ ನಿರೂಪಸಿದರು. ಶಿಕ್ಷಕಿಯರಾದ ಸೌಮ್ಯ ಮತ್ತು ಕೃತಿ ಬಹುಮಾನಿತರ ಹೆಸರು ವಾಚಿಸಿದರು. ಅತಿಥಿ ಶಿಕ್ಷಕಿ ಕಲಾವತಿ ವಂದಿಸಿದರು.

LEAVE A REPLY

Please enter your comment!
Please enter your name here