ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ ಕೆ, ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಜೈನ್ ಕಲ್ಲೇಗ

ಪುತ್ತೂರು: ಪುತ್ತೂರು ಕೆ.ಪಿ.ಕಾಂಪ್ಲೆಕ್ಸ್‌ನಲ್ಲಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ವಿಟ್ಲದಲ್ಲಿ ಶಾಖೆಯನ್ನು ಹೊಂದಿರುವ ಸ್ವಾಭಿಮಾನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಆಡಳಿ ಮಂಡಳಿ ಅಧ್ಯಕ್ಷರಾಗಿ ಇಳಂತಿಲದ ಗೋಪಾಲಕೃಷ್ಣ ಭಟ್ ಕೆ ಮತ್ತು ಉಪಾಧ್ಯಕ್ಷರಾಗಿ ಕಾರ್ಜಾಲು ನಿವಾಸಿ ಅಜಿತ್ ಕುಮಾರ್ ಜೈನ್ ಕಲ್ಲೇಗ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.


ಆ.11ರಂದು ನೂತನ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದ ಬಳಿಕ ಆ. 14ರಂದು ನಡೆದ ಅಧ್ಯಕ್ಷರ ಉಪಾಧ್ಯಕ್ಷರ ಆಯ್ಕೆಯು ಕೂಡಾ ಅವಿರೋಧವಾಗಿ ನಡೆದಿದೆ. ನಿರ್ದೇಶಕರುಗಳಾಗಿ ಆರ್ಯಾಪು ಗ್ರಾಮದ ಬೀಡು ಫಾರ್ಮ್‌ನ ವಿಶ್ವನಾಥ ರೈ ಎಮ್.ಬಿ, ಚಾರ್ವಾಕ ದೇವರಗುಡ್ಡೆ ನಿವಾಸಿ ಪಟೇಲ್ ಗೋಪಾಲಕೃಷ್ಣ ಗೌಡ, ವಿಟ್ಲ ಶಾಲಾ ರಸ್ತೆ ನಿವಾಸಿ ಜೋನ್ ಡಿ’ಸೋಜ, ಕೋಡಿಂಬಾಡಿ ಶ್ರೀನಿಲಯದ ಬಾಲಕೃಷ್ಣ ಬೋರ್ಕರ್, ಕುಂತೂರು ಗುರು ನಿವಾಸದ ಶಂಕುತಾಳಾ ಶೆಟ್ಟಿ, ಉರ್ಲಾಂಡಿ ನಿವಾಸಿ ಲೋಕೇಶ್ ಹೆಗ್ಡೆ ಯು, ಕಲ್ಲೇಗ ನಿವಾಸಿ ಸಂಜೀವ ನಾಯಕ್ ಕೆ, ಆರ್ಯಾಪು ಗೆಣಸಿನಕುಮೇರು ನಿವಾಸಿ ಚಿದಾನಂದ ಸುವರ್ಣ ಜಿ, ವಿಟ್ಲದ ರಘುರಾಮ ರೈ, ಪಡ್ನೂರು ಗ್ರಾಮದ ಎಡಕ್ಕಾನ ಸರಸ್ವತಿ ಇ ಭಟ್, ಕೆದಂಬಾಡಿಯ ಗಂಗಾರತ್ನ ವಿ ರೈ ಎಮ್, ಬುಡೋಳಿ ಪೆರಾಜೆಯ ಜನಾರ್ಧನ ಪೆರಾಜೆ ಅವರು ಆಯ್ಕೆಗೊಂಡಿದ್ದಾರೆ. ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಉಪಸ್ಥಿತರಿದ್ದು, ಸಹಕಾರ ಸಂಘಗಳ ನವೀನ್ ಕುಮಾರ್ ಎಂ.ಎಸ್ ಅವರು ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದರು.


ಗೋಪಾಲಕೃಷ್ಣ ಭಟ್ ಕೆ, ಅಜಿತ್ ಕುಮಾರ್ ಜೈನ್ ಕಲ್ಲೇಗ, ವಿಶ್ವನಾಥ ರೈ ಎಮ್.ಬಿ, ಗೋಪಾಲಕೃಷ್ಣ ಗೌಡ, ಜೋನ್ ಡಿ’ಸೋಜ, ಬಾಲಕೃಷ್ಣ ಬೋರ್ಕರ್, ಶಂಕುತಾಳಾ ಶೆಟ್ಟಿ, ಲೋಕೇಶ್ ಹೆಗ್ಡೆ ಯು, ಸಂಜೀವ ನಾಯಕ್ ಕೆ, ಚಿದಾನಂದ ಸುವರ್ಣ ಜಿ, ರಘುರಾಮ ರೈ, ಸರಸ್ವತಿ ಇ ಭಟ್, ಗಂಗಾರತ್ನ ವಿ ರೈ ಎಮ್, ಜನಾರ್ಧನ ಪೆರಾಜೆ, ತುಳಸಿ

LEAVE A REPLY

Please enter your comment!
Please enter your name here