ಕೊಂಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರೋತ್ಸವ, ಕುಡಿಯುವ ನೀರಿನ ಆರ್.ಓ. ಘಟಕ ಉದ್ಘಾಟನೆ

0

ಪುತ್ತೂರು: ಕೊಂಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಅ.15ರಂದು ಸ್ವಾತಂತ್ರ್ಯೋತ್ಸವ ಅಂಗವಾಗಿ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಧ್ವಜಾರೋಹಣಗೈದು, ಶುಭಹಾರೈಸಿದರು.
ಶಾಸಕರ ಅನುದಾನದಲ್ಲಿ ನೀಡಿದ ಕುಡಿಯುವ ನೀರಿನ ಆರ್.ಓ. ಘಟಕವನ್ನು ಅಂಗನವಾಡಿ ಬಾಲವಿಕಾಸ ಕೇಂದ್ರದ ಸದಸ್ಯರಾದ ವತ್ಸಲಾರಾಜ್ಞಿ, ಮಾಜಿ ಪುರಸಭಾ ಸದಸ್ಯೆ ಪ್ರೇಮಲತಾ ರಾವ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಹೊನ್ನಮ್ಮ, ಸಹಾಯಕಿ ಸ್ವರ್ಣಲತಾ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ವಿಜಯಶಾಂತಿ, ವಿವಿಧ ಅಂಗನವಾಡಿ ಕೇಂದ್ರಗಳ ಶಿಕ್ಷಕಿಯರಾದ ಯಶೋಧಾ, ರೋಹಿಣಿ, ಜೀವಲಾಕ್ಷಿ ಸಹಾಯಕಿ ಗುಲಾಬಿ, ಆಶಾ ಕಾರ್ಯಕರ್ತೆ ಜಯಲತಾ, ಹಿರಿಯ ಕ್ರಿಕೆಟಿಗ ಉದ್ಯಮಿ ಗಣೇಶ್ ಬಾಳಿಗ, ಪೋಷಕರು, ಸ್ಥಳೀಯರುಗಳಾದ ಶಾಂತಾರಾಮ ಕಾಮತ್, ನಳಿನಿ ಕಾಮತ್ ಕವಿತಾ, ನಮಿತಾ ಉರ್ಲಾಂಡಿ, ದೀಪಿಕಾ, ಪುಷ್ಪಾವತಿ, ಅನುಪಮ, ರಮ್ಯಾ, ಶೃತಿ, ಸಂಪತ್ ಕುಮಾರ್, ವಿನೀತ್ ಕುಮಾರ್, ಧನ್ಯಾ, ಸುಮತಿ, ಶರ್ಮಿಳಾ, ವೀಣಾ, ಸಾವಿತ್ರಿ, ಸುಧಾ ಎಸ್ ರಾವ್, ಲಲಿತಾ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here