ಸೆ.2,3 ರಂದು ವಿಟ್ಲದಲ್ಲಿ ಪ್ರಥಮ ಬಾರಿಗೆ ಬೃಹತ್ ಸಸ್ಯಮೇಳ ,ಆಹಾರ ಮೇಳ ,ಮ್ಯೂಸಿಕಲ್ ನೈಟ್

0

ಪುತ್ತೂರು : ವಿಟ್ಲ ನೀರಾಕಣಿ ಜೆ.ಎಲ್ ಅಡಿಟೋರಿಯಂನಲ್ಲಿ ಸೆ. 2 ಹಾಗೂ 3ರಂದು ಎರಡು ದಿನಗಳ ಬೃಹತ್ ಸಸ್ಯಮೇಳ ,ಆಹಾರ ಮೇಳ ಪ್ರದರ್ಶನ ,ಮಾರಾಟ ಹಾಗೂ ಮ್ಯೂಸಿಕಲ್ ನೈಟ್ ಅದ್ಧೂರಿ ಕಾರ್ಯಕ್ರಮವ ನಡೆಯಲಿದೆ.

ಮೇಳದಲ್ಲಿ ಸುಮಾರು ಸಾವಿರಕ್ಕೂ ಮೀರಿ ವಿವಿಧ ಬಗೆಯ ಔಷಧಿಯ ಸಸ್ಯಗಳು , ಹಣ್ಣಿನ ಗಿಡಗಳು ,ತರಕಾರಿ ಗಿಡಗಳು ,ನಾನಾ ಬಗೆಯ ಹೂವಿನ ಗಿಡಗಳ ಬೃಹತ್ ಪ್ರದರ್ಶನ ಹಾಗೂ ಆಹಾರ ಮೇಳದಲ್ಲಿ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿನ , ಆಯಾಯ ಋತುವಿಗೆ ಸೇವಿಸುವ , ಬಳಸುವಂತಹ ತಿಂಡಿ- ತಿನಿಸುಗಳು ಪ್ರದರ್ಶನ , ಹೊರ ಜಿಲ್ಲೆಯ ಜನ ಉಪಯೋಗಿಸುವಂತಹ ರಾಗಿ ,ಜೋಳ ಇವುಗಳಿಂದ ತಯಾರು ಪಡಿಸಿರುವಂತಹ ಸವಿಯಾದ ವಿವಿಧ ಬಗೆಯ ರೊಟಿ ಸಹಿತ ಹಲವೂ ಬಗೆಯ ತಿನಿಸುಗಳೂ ಈ ಮೇಳದಲ್ಲಿ ಪ್ರದರ್ಶನದ ಜೊತೆಗೆ ಮಾರಾಟ ಕಾರ್ಯ ನಡೆಯಲಿದೆ.


ಕಾರ್ಯಕ್ರಮ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲನೆ ಮೂಲಕ ನೆರವೇರಿಸಲಿದ್ದು , ಸ್ಪೀಕರ್ ಯು.ಟಿ.ಖಾದರ್ ಜೊತೆ ಸೇರಲಿರುವರು.
ಗಾಯಕಿ ರೂಪಾ ಪ್ರಕಾಶ್ ಮಹಾದೇವನ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೆ.3 ರಂದು ತುಳು ಹಾಸ್ಯ ಕಲಾವಿದ ಅರವಿಂದ ಬೋಳಾರ್ ಹಾಗೂ ಡೈಜೀ ವರ್ಲ್ಡ್ ಇದರ ವಾಲ್ಟರ್ ನಂದಳಿಕೆ ಭಾಗವಹಿಸಲಿದ್ದು , ಡೈಜೀ ವರ್ಲ್ಡ್ ನ ಚೇತನ್ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ. ಈ ಮೇಳದಲ್ಲಿ ಸ್ಟಾಲ್ ತೆರೆಯಲು ಆಸಕ್ತಿಯಿರುವಂಥವರು ಆಯೋಜಕರ ಮೊಬೈಲ್ ಸಂಖ್ಯೆ 7760083023 ಸಂಪರ್ಕಿಸಿ ,ನೋಂದಾವಣೆ ಮಾಡುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here