ಎನ್‌ ಸುಧಾಕರ ಶೆಟ್ಟಿ ಮೃತದೇಹ ನೆಲ್ಲಿಕಟ್ಟೆ ಮನೆಗೆ-ಅಂತಿಮ ದರ್ಶನ ಪಡೆದ ಗಣ್ಯರು

0

ಪುತ್ತೂರು:ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಏಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್‌ ಸುಧಾಕರ ಶೆಟ್ಟಿ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ದೇವತಾ ಸಮಿತಿ ಅಧ್ಯಕ್ಷರಾಗಿದ್ದ ಸುಧಾಕರ ಶೆಟ್ಟಿ ಅವರ ಮೃತದೇಹವನ್ನು ಇಂದು(ಸೆ.11) ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ತರಲಾಗಿದೆ. ನೂರಾರು ಜನರು ಮೃತರ ಅಂತಿಮ ದರ್ಶನ ಪಡೆದರು.ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ,ಮಾಜಿ ಶಾಸಕ ಸಂಜೀವ ಮಠಂದೂರು,ಮಾಜಿ ಸಚಿವ ರಮನಾಥ ರೈ, ಆಶಾ ತಿಮ್ಮಪ್ಪ ಗೌಡ, ರಾಧಕೃಷ್ಣ ಆಳ್ವ, ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.

LEAVE A REPLY

Please enter your comment!
Please enter your name here