ಕಡಬ: ಎಸ್.ಐ. ಆಂಜನೇಯ ರೆಡ್ಡಿಯವರಿಗೆ ಭಜನಾ ಮಂಡಳಿಯಿಂದ ಬೀಳ್ಕೊಡುಗೆ

0

ಕಡಬ: ಇಲ್ಲಿನ ಠಾಣೆಯಲ್ಲಿ ಎಸ್.ಐ. ಆಗಿ ಪುತ್ತೂರು ಠಾಣೆಗೆ ವರ್ಗಾವಣೆಗೊಂಡ ಆಂಜನೇಯ ರೆಡ್ಡಿಯವರಿಗೆ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಗೌರವಿಸಿ ಬಿಳ್ಕೋಡಲಾಯಿತು.


ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ಅವರು ಶಾಲು,ಫಲಪುಷ್ಪ ದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯ್ಕ್ ಕಾರ್ಯದರ್ಶಿ ಮನೋಹರ್ ರೈ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here