ಕೊಳ್ತಿಗೆ : ಕಂಟ್ರಮಜಲಿನಲ್ಲಿ ಮನೆಯಿಂದ ಪೂಜಾ ಸಾಮಗ್ರಿಗಳ ಸಹಿತ ನಗದು ಕಳ್ಳತನ ,ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

0

ಬೆಳ್ಳಾರೆ : ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಂಟ್ರಮಜಲು ಎಂಬಲ್ಲಿ ಮನೆಯೊಂದರ ಬಾಗಿಲಿನ ಬೀಗವನ್ನು ಒಡೆದು, ಮನೆಯಲ್ಲಿದ್ದ ಪೂಜಾ ಸಾಮಗ್ರಿಗಳನ್ನು ಹಾಗೂ ನಗದು ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.ಕಂಟ್ರಮಜಲು ನಿವಾಸಿ ಹರೀಶ್ ಆಚಾರ್ಯ ಅವರ ಮನೆಗೆ ಬೀಗ ಮುರಿದು ನುಗ್ಗಿದ ಕಳ್ಳರು ನಗದು ಹಣ 4,000 ರೂ. ಹಾಗೂ ಬೆಳ್ಳಿ, ತಾಮ್ರ, ಹಿತ್ತಾಳೆಯ ವಿವಿಧ ಪೂಜಾ ಪರಿಕರಗಳು ಸೇರಿದಂತೆ ಒಟ್ಟು ರೂ 31,350 / -ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ.

ಸೆ.5ರಿಂದ ಸೆ.11ರ ನಡುವೆ ಈ ಕಳ್ಳತನ ನಡೆಸಲಾಗಿದ್ದು, ಹರೀಶ್ ಆಚಾರ್ಯ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here