ಇಂದ್ರಪ್ರಸ್ಥ ವಿದ್ಯಾಯಲದ ವಿಜ್ಞಾನ ನಾಟಕ ತಂಡ ಜಿಲ್ಲಾ ಮಟ್ಟಕ್ಕೆ

0

ಉಪ್ಪಿನಂಗಡಿ: ಸೆಪ್ಟೆಂಬರ್ 12ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರುನಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳು ಅಭಿನಯಿಸಿದ ಬೆಳಕಿನ ದಾರಿ ಎಂಬ ವಿಜ್ಞಾನ ನಾಟಕವು ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.


ಈ ನಾಟಕವನ್ನು ಸಂಸ್ಥೆಯ ಚಿತ್ರಕಲಾ ಶಿಕ್ಷಕರಾದ ಸದಾಶಿವ ಶಿವಗಿರಿ ಕಲ್ಲಡ್ಕ ಇವರು ರಚಿಸಿ ನಿರ್ದೇಶಿಸಿರುತ್ತಾರೆ. 8ನೇ ತರಗತಿಯ ವಿದ್ಯಾರ್ಥಿಗಳಾದ ಸೋನಿಕಾ ಟಿ. ಎಸ್, ಸಾನ್ವಿ
ನಾಯಕ್, ಶ್ರೀರಕ್ಷಾ ಎಸ್, ಅನ್ವಿತಾ ಶೆಟ್ಟಿ, ಅನ್ಮಯ್ ಡಿ ಶೆಟ್ಟಿ, ಅಕ್ಷಯ್ ವೈ, ಲಾಸ್ಯ.ಕೆ, ಹಾಗೂ ಮೋಕ್ಷಾ ಎಂ ರೈ ಅವರು ಭಾಗವಹಿಸಿರುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥರು
ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here